ಪರಮೇಶ್ವರ್ ಅವರ  ರಾಜೀನಾಮೆ ತಿರಸ್ಕರಿಸಿದ ಸಭಾಪತಿ ಶಂಕರ್ ಮೂರ್ತಿ-ಕಾರಣ ಏನ್ ಗೊತ್ತಾ?

24 May 2018 4:53 PM | Politics
618 Report

ಕರ್ನಾಟಕ ರಾಜ್ಯದ ನೂತನ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆದರೆ ರಾಜೀನಾಮೆಯನ್ನು ಸಭಾಪತಿ ಶಂಕರಮೂರ್ತಿ ಅವರು ನಿರಾಕರಿಸಿದ್ದಾರೆ. ಯಾವುದೇ ವ್ಯಕ್ತಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಪರಿಷತ್ ಸದಸ್ಯತ್ವ ತನ್ನಂತಾನೆ ರದ್ದಾಗುತ್ತದೆ. ಇದಕ್ಕೆ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.ರಾಜೀನಾಮೆ ನೀಡುವಂತಹ ಯಾವುದೇ ಅಗತ್ಯವಿಲ್ಲ ಎಂದು ಸಭಾಪತಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

 

Edited By

Manjula M

Reported By

Manjula M

Comments