ಸೋಲಿನ ಭೀತಿಯಲ್ಲಿರುವ ಸಿ.ಎಂ ಗೆ ಮತ್ತೊಂದು ಶಾಕ್..!!

08 May 2018 6:08 PM | Politics
835 Report

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾಕಷ್ಟು ಶಾಸಕರಿಗೆ  ಐಟಿ ಶಾಕ್ ನೀಡಿದೆ.  ಸಿ.ಎಂ ಸಿದ್ದರಾಮಯ್ಯನವರಿಗೆ ನಿನ್ನೆ ಐಟಿ ಶಾಕ್ ನೀಡಿದೆ.. ಚುನಾವಣಾ ಅಖಾಡದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖರ್ಚು ಮಾಡಲು ಇಟ್ಟಿರುವಂತಹ ಹಣಗಳನ್ನು ಐಟಿ ಇಲಾಖೆಯು ವಶಪಡಿಸಿಕೊಂಡಿದೆ.

ಈ ಬಾರಿ ಸಿ.ಎಂ ಸಿದ್ದರಾಮಯ್ಯನವರು ಎರಡು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದ್ದಾರೆ ಎಂದು ಹೇಳಲಾಗುತ್ತಿದೆ.. ಈ ಬಾರಿ ಕಾಂಗ್ರೆಸ್ ನ ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ಉಳಿದ ಪಕ್ಷಗಳು ಬಲಿಷ್ದವಾದ ಅಭ್ಯರ್ಥಿಗಳನ್ನೆ ಕಣಕ್ಕೆ ಇಳಿಸಿದೆ.ಹೀಗಾಗಿ ಸಿದ್ದರಾಮಯ್ಯ ಹಣದ ಹೊಳೆಯನ್ನೆಹರಿಸಲು ಮುಂದಾಗಿದ್ದಾರೆ. ಹೈವೋಲ್ಟೇಜ್ ಚುಣಾವಣೆ ಇದಾಗಿದ್ದು ಮುಖ್ಯಮಂತ್ರಿ ಯಾರು ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿ ಹಣದ ಮೂಲಕ ಗೆಲುವನ್ನು ಸಾಧಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಕಳೆದ ರಾತ್ರಿಯ ವೇಳೆ ಬಾದಾಮಿಯಲ್ಲಿರುವ ರೆಸಾರ್ಟ್‍ವೊಂದಕ್ಕೆ ದಾಳಿ ಮಾಡಿ ಚುನಾವಣೆಗೆ ಸಂಗ್ರಹಿಸಿಟ್ಟಿದ್ದ ದಾಖಲೆ ಇಲ್ಲದ ಹಣಗಳನ್ನು ವಶಪಡಿಸಿಕೊಂಡಿದ್ದಾರೆ.  ಬಾದಾಮಿಯ ಈ ರೆಸಾರ್ಟ್‍ನಲ್ಲಿ ತಂಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಠಡಿಗೆ ಐಟಿ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಡ್ ರೂಂ ನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 15 ಲಕ್ಷ ರೂಗಳು ಸಿಕ್ಕಿದ್ದು ಐಟಿ ಅಧಿಕಾರಿಗಳು ನಗದನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಾರಿ ಸಿದ್ದರಾಮಯ್ಯ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.

Edited By

Manjula M

Reported By

Manjula M

Comments