ರೆಬಲ್ ಗೆ ಡೆಡ್ ಲೈನ್ ಕೊಟ್ಟ ವೇಣುಗೋಪಾಲ್  

23 Apr 2018 2:21 PM | Politics
844 Report

ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕೆಲವರಿಗೆ ಟಿಕೆಟ್ ಸಿಗದೆ ದು:ಖದಲ್ಲಿದ್ದರೆ ಮತ್ತೆ ಕೆಲವರು ಟಿಕೆಟ್ ಸಿಕ್ಕರೂ ನಾಮಪತ್ರ ಸಲ್ಲಿಸದೆ ಆಟವಾಡುತ್ತಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಅಂಬರೀಶ್ ಅವರು ಬಿ.ಫಾರಂ ಕೊಟ್ಟರೂ ಕೂಡ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಇಂದು ಸಂಜೆ 5 ಗಂಟೆಯ ಒಳಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಅಂಬರೀಶ್ ಗೆ ವೇಣುಗೋಪಾಲ್ ಈಗಾಗಲೇ ಡೆಡ್ ಲೈನ್ ನಿಗದಿಪಡಿಸಿದ್ದಾರೆ.ನಾಳೆಯೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಹೀಗಾಗಿ ಇಂದು ಸಂಜೆ 5 ಗಂಟೆಯ ಒಳಗಾಗಿ ನಿರ್ಧಾರ ತಿಳಿಸಲು ಸೂಚಿಸಲಾಗಿದೆ. ಇಂದು ಸಂಜೆಯೊಳಗೆ ರೆಬಲ್ ಯಾವುದೇ ತೀರ್ಮಾನ ತಿಳಿಸದೇ ಇದ್ದಲ್ಲಿ. ಪರ್ಯಾಯ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

 

Edited By

Manjula M

Reported By

Manjula M

Comments