ಚುನಾವಣಾ ಆಯೋಗದಿಂದ ಸರ್ಕಾರಿ ನೌಕರರಿಗೆ ಶಾಕ್ !

21 Apr 2018 10:32 AM | Politics
400 Report

ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರು ಪಕ್ಷ, ನಾಯಕ ಎಂದು ಪ್ರಚಾರಕ್ಕೆ ಇಳಿದರೆ 1951 ರ ಪ್ರಜಾಪ್ರತಿನಿಧಿ ಕಾಯಿದೆ ಉಲ್ಲಂಘನೆಯಾಗುತ್ತದೆ ಎಂದು ಚುನಾವಣೆ ಆಯೋಗ  ಈಗಾಗಲೆ ಸ್ಪಷ್ಟಪಡಿಸಿದೆ.

ಆದರು ಇದೆಲ್ಲಾ ಗೊತ್ತಿದ್ದರೂ ಕೂಡ  ಕೆಲ ಸರ್ಕಾರಿ ಅಧಿಕಾರಿಗಳು  ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೆಲ ಮುಖಂಡರ ಹಾಗೂ ಪಕ್ಷಗಳ ಪರ ಪ್ರಚಾರವನ್ನು ನಡೆಸಿದ್ದಾರೆ. ಈ ಸಂಬಂಧ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ, ಕೌಜಲಗಿಯಲ್ಲಿರುವ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ನ ವಿಭಾಗ ಐದರ ಕಾರ್ಯ ನಿರ್ವಾಹಕ ಅಭಿಯಂತರ ಭೀಮರಾಯಿ ಅಳಗೋಡಿಯವರಿಗೆ ಕ್ರಮ ಜರುಗಿಸುವಂತೆ  ಚುನಾವಣಾ ಆಯೋಗವು ನೋಟಿಸ್ ನೀಡಿದೆ.

 

Edited By

Manjula M

Reported By

Manjula M

Comments