ಅಂಬರೀಶ್ ಸ್ಪರ್ಧೆಗೆ ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ಟ ಕೈ ಹೈಕಮಾಂಡ್

10 Apr 2018 1:17 PM | Politics
737 Report

ಟಿಕೆಟ್ ವಿಚಾರಕ್ಕಾಗಿ ಅಂಬರೀಶ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವಿನ ಗುದ್ದಾಟ ಬಹುತೇಕ ಮುಕ್ತಾಯಗೊಂಡಿದ್ದು , ನಿನ್ನೆ ನಡೆದ ಸ್ಕ್ರೀನಿಂಗ್ ಕಮಿಟಿಯಲ್ಲಿ ಮಂಡ್ಯದಲ್ಲಿ ಅಂಬರೀಶ್ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.

ಕೆ.ಆರ್. ಪೇಟೆ ಹಾಗೂ ಮದ್ದೂರು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯನ್ನು ಅಂಬರೀಶ್ ಅವರಿಗೆ ಬಿಟ್ಟಿದೆ. ಉಳಿದಂತೆ 7 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದೆ ಎನ್ನಲಾಗಿದೆ.ಮಂಡ್ಯದಲ್ಲಿ ಅಂಬರೀಶ್, ಮಳವಳ್ಳಿಯಲ್ಲಿ ಪಿ.ಎಂ ನರೇಂದ್ರಸ್ವಾಮಿ, ಶ್ರೀರಂಗಪಟ್ಟಣದಲ್ಲಿ ರಮೇಶ್ ಬಂಡಿಸಿದ್ದೇಗೌಡ, ನಾಗಮಂಗಲದಲ್ಲಿ ಎನ್. ಚಲುವರಾಯ ಸ್ವಾಮಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

 

Edited By

Manjula M

Reported By

Manjula M

Comments