ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಪುಟ್ಟಣ್ಣಯ್ಯ ನವರ ಪುತ್ರ ದರ್ಶನ್

15 Mar 2018 6:23 PM | Politics
560 Report

ಮೇಲುಕೋಟೆ ಕ್ಷೇತ್ರದಲ್ಲಿ ಜನರು ಕಾಂಗ್ರೆಸ್​, ಬಿಜೆಪಿ ಪಕ್ಷಗಳಿಗೆ ಮತ ಹಾಕದೆ ಪುಟ್ಟಣ್ಣಯ್ಯ ಕುಟುಂಬವನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. ರೈತಪರ ನಾಯಕ, ಶಾಸಕ ಕೆ.ಎಸ್​.ಪುಟ್ಟಣ್ಣಯ್ಯ ಇತ್ತೀಚೆಗೆ ಹೃದಯಾಘಾತದಿಂದ ತೀರಿಕೊಂಡ ಬಳಿಕ ಅವರ ಮಗನ ಮೇಲೆ ಚುನಾವಣೆಗೆ ಸ್ಪರ್ಧಿಸುವ ಒತ್ತಡ ಹೆಚ್ಚಾಗಿತ್ತು.

ಮಾ.8ರಂದು ನಡೆದ ಸಭೆಯಲ್ಲಿ ಬಹುತೇಕ ಜನರು ದರ್ಶನ್​ ಅಭ್ಯರ್ಥಿಯಾಗಬೇಕು ಎಂದು ಒತ್ತಡ ಹೇರಿದ್ದರು. ನಿಡುಮಾಮಿಡಿ ಶ್ರೀಗಳು ಸುನೀತಾ ಪುಟ್ಟಣ್ಣಯ್ಯ ಅಭ್ಯರ್ಥಿಯಾಗಬೇಕು ಎಂದು ಆಶಿಸಿದ್ದರು. ಅದರಂತೆ ಇಂದು ಪುಟ್ಟಣ್ಣಯ್ಯ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು.

Edited By

Shruthi G

Reported By

Madhu shree

Comments