ಕೆಪಿ ಜೆಪಿ ಪಕ್ಷದಿಂದ ಉಪೇಂದ್ರ ಔಟ್ ...?

05 Mar 2018 3:22 PM | Politics
665 Report

ಉಪೇಂದ್ರ ಹಾಗು ಮಹೇಶ್ ಗೌಡರ ನಡುವೆ ಅಭ್ಯರ್ಥಿಗಳ ಆಯ್ಕೆ ಹಾಗೆ ಇನ್ನಿತರ ವಿಷಯಗಳಲ್ಲಿ ಬಿನ್ನಾಭಿಪ್ರಾಯ ಮೂಡಿದ್ದು, ಇದೀಗ ಉಪೇಂದ್ರ ರವರು ಹೊರ ನಡೆಯಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಈ ಮೊದಲು ಮಹೇಶ್ ಗೌಡರವರೇ ಈ ಪಕ್ಷದ ಸಂಸ್ಥಾಪಕರು ಇವರು ಪಕ್ಷ ಸ್ಥಾಪಿಸಿದ ನಂತರ ಉಪೇಂದ್ರ ರವರು ಕೆಪಿ ಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಇದೀಗ ಎಲ್ಲ ಜವಾಬ್ದಾರಿಯನ್ನು ತಾವೇ ನಿಭಾಯಿಸುತ್ತೇವೆ ಎಂದು ಹೇಳಿರುವುದು ಈ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧ ಪಟ್ಟ ಹಾಗೆ ಉಪೇಂದ್ರ ಅವರೇ ಎಲ್ಲ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಗುತ್ತಿದ್ದು, ಪಕ್ಷದ ಮುಖಂಡರನ್ನು ಕಡೆಕಾಣಿಸಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ. ಪಕ್ಷದ ಸಭೆಗೆ ಗೈರಾಗಿದ್ದ ಉಪ್ಪಿ , ಅವರ ಬದಲು ಅವರ ಸಹೋದರ ಸುಧೀಂದ್ರರವರು ಸಭೆಗೆ ತೆರಳಿದ್ದಾರೆ . ಈ ಬಗ್ಗೆ ಇಂದು ಸದಸ್ಯರ ಜೊತೆ ಚರ್ಚಿಸಿ ನಂತರ ಈ ಪ್ರಶ್ನೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲ್ಲಿದ್ದಾರೆ.

Edited By

Shruthi G

Reported By

Madhu shree

Comments