ಕಮಲದ ದಳ ಉದಿರಿಸುವತ್ತ ಮುಂದಾದ ಜೆಡಿಎಸ್..!!

17 Feb 2018 6:47 PM | Politics
9262 Report

ಕರ್ನಾಟಕ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ರಾಜ್ಯ ರಾಜಕೀಯದಲ್ಲಿ ಅಲ್ಲೊಲ್ಲ ಕಲ್ಲೋವೇಳುವ ಸಾಧ್ಯತೆಗಳು ಹೆಚ್ಚಿವೆ. ನಾವೇ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆಂದು ಪೈಪೋಟಿ ನೀಡುತ್ತಿರುವ ಪಕ್ಷಗಲ್ಲಿ ದಿನವೂ ಒಂದು ರೀತಿಯ ಬದಲಾವಣೆಗಳಾಗುತ್ತಿವೆ. ಒಂದು ಪಕ್ಷಕ್ಕೆ ತೀವ್ರ ಹಿನ್ನಡೆಯಾದರೆ ಮತ್ತೊಂದು ಪಕ್ಷಕ್ಕೆ ಮುನ್ನಡೆಯಲು ಬಲ ಬಂದಂತಾಗಿದೆ.

ಇತ್ತೀಚಿಗೆ ಕಾಣುವಂತೆ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ ಇದು ರಾಜ್ಯ ರಾಜಕಾರಣದ ತಿರುವಿಗೆ ಕಾರಣವಾಗುತ್ತಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪನವರಿಗೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.  ಬೇರೆ ಪಕ್ಷದತ್ತ ಮುಖ ಮಾಡಿರುವ ಈಶ್ವರಪ್ಪ ನವರು ಬರಮಾಡಡಿಕೊಳ್ಳಲು ಜೆಡಿಎಸ್ ಸಜ್ಜಾಗಿದೆ. ರಾತೋರಾತ್ರಿ ಚುನಾವಣೆಯಲ್ಲಿ ಬಾರಿ ಬೆಳೆವಣಿಗೆ ಕಂಡು ಬಂದಿದೆ ಏನಪ್ಪಾ ಎಂದರೆ ಕೆ ಎಸ್ ಈಶ್ವರಪ್ಪ ನವರು ರಾತ್ರೋ ರಾತ್ರಿ ಜೆಡಿಎಸ್ ನ ವಿಶ್ವನಾಥ್ ಜೊತೆ ರಹಸ್ಯ ಮಾತುಕತೆಯಲ್ಲಿ ತೊಡಗಿದ್ದರಂತೆ. ಜೆಡಿಎಸ್ ವಿಶ್ವನಾಥ್ ರವರ ಮೊಬೈಲ್ ನಲ್ಲಿ ಎಚ್ ಡಿ ದೇವೇಗೌಡರೊಂದಿಗೆ ಗುಪ್ತವಾಗಿ ಮಾತನಾಡಿರುವುದು ತಿಳಿದು ಬಂದಿದೆ. ಅಷ್ಟಕ್ಕೂ ಕೆ ಎಸ್ ಈಶ್ವರಪ್ಪನವರು ಆ ಕರೆಯಲ್ಲಿ ಮಾತನಾಡಿದ್ದು ಏನು ಎಂಬುದು  ಜೆಡಿಎಸ್ ನ ವಿಶ್ವನಾಥ್ ರವರು ಈಶ್ವರಪ್ಪನವರಿಗೆ ಕುಮಾರಸ್ವಾಮಿ ಸರಿ ಸಮನಾದ ಪೋಸ್ಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಈಶ್ವರಪ್ಪನವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಈಶ್ವರಪ್ಪ ನವರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಮ್ಮೆ ಶಿವಮೊಗ್ಗದ ಸಭೆಯಲ್ಲಿ ಕೆ ಎಸ್ ಈಶ್ವರಪ್ಪನವರು ಮಾತನಾಡುತ್ತ ಕಣ್ಣೀರಿಡುತ್ತಾರೆ. ನಾನು ಕಟ್ಟಿ ಬೆಳಸಿದ ಬಿಜೆಪಿ ಪಕ್ಷದಲ್ಲಿ ಇಂದು ನನಗೆ ಸ್ಥಾನಮಾನಗಳಿಲ್ಲ. ಇದೆ ಕಾರಣಕ್ಕೆ ನಾನು ಬಿಜೆಪಿಯಲ್ಲಿರಲು ಇಷ್ಟವಾಗುತ್ತಿಲ್ಲ.ಇಷ್ಟ್ಟು ದೀರ್ಘಕಾಲ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇನೆ ಆದರೆ ಇಂತಹ ಮಾತನ್ನು ಯಾವತ್ತೂ ಕೂಡ ಕೇಳಿರಲಿಲ್ಲ. ನನ್ನ ಕೆಳಮಟ್ಟದ ಶಾಸಕರೆಲ್ಲ ಇಂದು ನನ್ನ ಬಗ್ಗೆ ಮಾತನಾಡುವಂತವರಾಗಿದ್ದಾರೆ. ಅದು ನನಗೆ ಸರಿ ಬರಲಿಲ್ಲವೆಂದು ಕಣ್ಣೀರಿಡುತ್ತಾರೆ. ಈ ವಿಷಯವನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ. ಇನ್ನೊಮ್ಮೆ ಮಾಜಿ ಸಿಎಂ ಯಡಿಯೂರಪ್ಪನವರ ನಿವಾಸದಲ್ಲಿ ಈಶ್ವರಪ್ಪನವರಿಗೆ ಟಿಕೆಟ್ ಕೊಟ್ಟರೆ ಸೋಲು ಖಚಿತವೆಂದು ಪಕ್ಷದ ಮುಖಂಡರೆಲ್ಲರೂ ಅಭಿಪ್ರಾಯ ಹೊರ ಹಾಕ್ಕಿದ್ದು ಕೆ ಎಸ್ ಈಶ್ವರಪ್ಪನವರಿಗೆ ಬೇಸರವನ್ನುಂಟು ಮಾಡಿದೆ. ಆದರಿಂದ ಪ್ರಧಾನಿ ಮೋದಿಯವರು ಮೈಸೂರಿಗೆ ಬಂದ ನಂತರ ತಾವು ಜೆಡಿಎಸ್ ಸೇರುವ ಹಿಂಗಿತ ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Edited By

Shruthi G

Reported By

Madhu shree

Comments