Report Abuse
Are you sure you want to report this news ? Please tell us why ?
ಉಳ್ಳವರ ಮನೆಯಲ್ಲಿ ಸ್ಲಂ ವಾಸ್ತವ್ಯ ನಾಟಕ: ಎಚ್ ಡಿಕೆ ಟೀಕೆ

13 Feb 2018 9:00 AM | Politics
467
Report
ಬಿಜೆಪಿ ನಾಯಕರಿಗೆ ಈ ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದಾಗ ಕೊಳೆಗೇರಿ ಜನರ ನೆನಪಾಗಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಲಂನಲ್ಲಿ ವಾಸ ಮಾಡುವವರು ನೆನಪಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದರು.
ತಾಲೂಕಿನ ಕೋಣಂದೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಅಂತಸ್ತಿನ ಉಳ್ಳವರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಬಿಜೆಪಿ ನಾಯಕರು ಕೊಳೆಗೇರಿ ನಿವಾಸಿಗಳ ಹೆಸರಲ್ಲಿ ಸ್ಲಂ ವಾಸ್ತವ್ಯ ಎಂಬ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Edited By
Shruthi G

Comments