ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದ ಯುವಕರು ಜೆಡಿಎಸ್ ಸೇರ್ಪಡೆ..!!

05 Feb 2018 6:39 PM | Politics
542 Report

ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದ ಗುಳೇದಗುಡ್ಡ ಯುವಕರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಯುವಕರ ಸೇರ್ಪಡೆಯಿಂದ ಹನುಮಂತ ಮಾವಿನಮರದವರಿಗೆ ಮತಷ್ಟು ಬಲ ಬಂದಿದ್ದು ಈ ಬಾರಿಯ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೋಲುಣಬಡಿಸುವ ತವಕದಲ್ಲಿದ್ದಾರೆ.

ಈ ಯುವಕರ ಸೇರ್ಪಡೆಯಿಂದ ಬಾದಾಮಿ ಕ್ಷೇತ್ರದಲ್ಲಿ ಕೂಡ ಜೆಡಿಎಸ್ ಪ್ರಬಾಲ್ಯತೆ ಮೆರೆಯುವ ಎಲ್ಲ ಲಕ್ಷಣಗಳನ್ನು ತೋರುತ್ತಿದ್ದೆ. ಜೆಡಿಎಸ್ ಯುವಕರಿಗೆ ಸ್ಪೂರ್ತಿ ನೀಡುವುದಲ್ಲದೆ ಪ್ರೋತ್ಸಹ ನೀಡುವುದರ ಮೂಲಕ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಯುವಶಕ್ತಿಗೆ ಉತ್ತೇಜನ ಹಾಗು ಮಾರ್ಗದರ್ಶನ ನೀಡುದುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಹಕಾರಿಯಾಗಿದೆ.  

Edited By

Shruthi G

Reported By

Shruthi G

Comments