ಬಿಜೆಪಿ ಪಕ್ಷ ಸೇರಿಕೊಳ್ಳಲಿದ್ದಾರಾ ಚಾಲೆಂಜಿಂಗ್ ಸ್ಟಾರ್..?

03 Feb 2018 10:20 AM | Politics
244 Report

ನಗರದ ಎಸ್.ಆರ್.ಎನ್.ಇ. ಪೌಂಡೇಶನ್ ನ ಅದ್ಧೂರಿ ಯುವ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಅವರು, ಜನರನ್ನುದ್ದೇಶಿಸಿ ಮಾತನಾಡುವಾಗ, 'ಜೀವನದಲ್ಲಿ ಎರಡು ಕೆಲಸ ಮಾಡಬೇಡಿ. ಒಂದು ತಲೆ ಹಿಡಿಯೋದು, ಮತ್ತೊಂದು ತಲೆ ಹೊಡಿಯೋದು. ಇಲ್ಲಿ ಯಾರು ಯಾರಿಗೂ ಆಗಲ್ಲ. ಒಂದು ಗುರಿ ಇಟ್ಟುಕೊಳ್ಳಿ. ಎರಡು ದೋಣಿಯಲ್ಲಿ ಕಾಲಿಡಬೇಡಿ. ನಮ್ಮ ತೆಪ್ಪ ನಮ್ಮ ಕೋಲು ನಮ್ಮ ಕೈಯಲ್ಲಿ ಇರಬೇಕು. ಆಗ ಮಾತ್ರ ದಡ ಮುಟ್ಟೋಕೆ ಸಾಧ್ಯ ಎಂದು ತಮ್ಮ ಅಭಿಮಾನಿಗಳಿಗೆ ಕರೆನೀಡಿದ್ದಾರೆ.

ಜೀವನದಲ್ಲಿ ಎದುರಾದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಕಷ್ಟಪಟ್ಟು ಸ್ಟಾರ್ ಪಟ್ಟ ಅಲಂಕರಿಸಿದ ಸ್ಯಾಂಡಲ್ ವುಡ್ ನ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಹೇಗಿರಬೇಕು ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಲ್ಲದೆ ತಮ್ಮ ರಾಜಕೀಯದ ಮುಂದಿನ ನಡೆಯನ್ನ ಈ ವೇದಿಕೆ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷ ಸೇರಿಕೊಳ್ಳುವ ಮುನ್ಸೂಚನೆಯನ್ನ ನೀಡಿದ್ದಾರೆ ಎಂದು ಯುವ ಉತ್ಸವ ಕಾರ್ಯಕ್ರಮವನ್ನ ಆಯೋಜಿಸಿದ್ದ ಎಸ್.ಆರ್.ಎನ್.ಇ ಪೌಂಡೇಶನ್ ನ ಅಧ್ಯಕ್ಷ ಎಸ್. ಆರ್ ನವಲಿಹಿರೇಮಠ ಅವರು ಹೇಳಿದ್ದಾರೆ.

Edited By

Shruthi G

Reported By

Madhu shree

Comments