ಕಾವೇರಿ ತೀರ್ಪಿನ ಬಗ್ಗೆ ಆತಂಕದಲ್ಲಿರುವ ದೇವೇಗೌಡ್ರು

29 Jan 2018 10:28 AM | Politics
341 Report

ಇನ್ನೆರಡು ವಾರದಲ್ಲಿ ಹೊರಬೀಳಲಿರುವ ಕಾವೇರಿ ತೀರ್ಪು ನನ್ನಲ್ಲಿ ಆತಂಕ ಮೂಡಿಸಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ನಾಗಮಂಗಲದ ಟಿ.ನೇರಳೇಕೆರೆ ಸಮೀಪ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ನ್ಯಾಯಾಂಗ ವಿರುದ್ಧ ತಿರುಗಿ ಬಿದ್ದ ಸುಪ್ರೀಂಕೋರ್ಟಿನ ನ್ಯಾಯಾಧೀಶರು ಈ ತೀರ್ಪು ನೀಡಲಿದ್ದು, ನನಗೆ ಆತಂಕ ಮೂಡಿಸಿದೆ ಎಂದಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವಿಫಲವಾಗಿವೆ ಎಂದು ದೂರಿದ್ದಾರೆ.

 

 

Edited By

Shruthi G

Reported By

Madhu shree

Comments