ಬಿ.ಎಸ್.ಯಡಿಯೂರಪ್ಪರವರನ್ನು ಶಿಕಾರಿಪುರದಲ್ಲಿ ಮಣಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್

27 Jan 2018 3:52 PM | Politics
7662 Report

 ಯಡಿಯೂರಪ್ಪ ಅವರು ಶಿಕಾರಿಪುರದಿಂದ  ಸ್ಪರ್ಧಿಸಲಿದ್ದಾರೆ  ಯಡಿಯೂರಪ್ಪಗೆ ಸೆಡ್ಡು ಹೊಡೆಯಲು ಜೆಡಿಎಸ್ ನಿಂದ ಜೆಡಿಎಸ್‌ನ ಎಚ್.ಬಳಿಗಾರ್ ರನ್ನು ಚುನಾವಣಾ ಅಖಾಡಕ್ಕಿಳಿಸಲು ಸಜ್ಜುಗೊಳಿಸುತ್ತಿದೆ.  ಶಿಕಾರಿಪುರದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಹಿಂದಿಕ್ಕಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.

 ಈಗಾಗಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸುವುದು ಖಚಿತವೆಂದು ಎಂದು ಮೂಲಗಳು ತಿಳಿಸುತ್ತಿವೆ. ರಾಜ್ಯದ ಜನತೆ ಜೆಡಿಎಸ್ ನತ್ತ ವಾಲುತ್ತಿದ್ದಾರೆ ಎನ್ನಲಾಗಿದೆ. ಬಿಎಸ್ ವೈ ಯಡಿಯೂರಪ್ಪರವರ ಭದ್ರ ಕೋಟೆ ಎಂದೇ ಹೇಳಬಹುದಾದ ಶಿಕಾರಿಪುರದಲ್ಲಿ ಯಡಿಯೂರಪ್ಪರವರನ್ನು ಮಣಿಸಲು ಜೆಡಿಎಸ್ ಹಲವು ತಂತ್ರಗಳನ್ನು ರೂಪಿಸಿದೆ.

Edited By

Suresh M

Reported By

Madhu shree

Comments