ಬಿಜೆಪಿಯ ಮತ್ತೊಂದು ವಿಕೆಟ್ ಜೆಡಿಎಸ್ ಪಾಲು

26 Jan 2018 7:59 AM | Politics
10865 Report

ತಾಲೂಕಿನ ಅತ್ತಿಬೆಲೆ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್‌ ಪಕ್ಷ ಆಯೋಜಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ತೊರೆದ ಬೆಸ್ತಮಾನಹಳ್ಳಿ ಯಲ್ಲಪ್ಪ ಹಾಗೂ ಕಾಂಗ್ರೆಸ್‌ ಪಕ್ಷದ ಹಲವು ನಾಯಕರು ಜೆಡಿಎಸ್‌ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದೇವೇಗೌಡ, ಜೆಡಿಎಸ್‌ ಮುಖಂಡರಾದ ರಾಮೇಗೌಡ, ಶ್ರೀನಾಥರೆಡ್ಡಿ, ಆರ್‌.ದೇವರಾಜ್‌, ಸಿ.ತೋಪಯ್ಯ, ಆನಂದ್‌, ರಾಮಚಾರಿ, ನಾರಾಯಣಸ್ವಾಮಿ, ರವಿಕುಮಾರ್‌, ಜಿಮ್‌ ಸುರೇಶ್‌, ಶುಭಾನಂದ್‌, ಮೆಣಿಸಿಗನಹಳ್ಳಿ ರಘು, ಯಲ್ಲಪ್ಪ, ಪ್ರಭು, ಗೋಪಾಲ್‌ ಮೊದಲಾದ ಮುಖಂಡರು ಭಾಗವಹಿಸಿದ್ದರು.

Edited By

Shruthi G

Reported By

Shruthi G

Comments