ಕೈ ತೊರೆದು ಹೊರೆ ಹೊರಲು ಸಿದ್ಧವಾಗಿದ್ದಾರಾ ಕಾಂಗ್ರೆಸ್ ಮುಖಂಡ ..!!

03 Jan 2018 12:29 PM | Politics
13428 Report

ಸತೀಶ ಜಾರಕಿ ಹೋಳಿ ಅವರು ಕಾಂಗ್ರೆಸು ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ. ಜ್ಯಾತ್ಯಾತೀತ ಮತಗಳ ವಿಭಜನೆಯಲ್ಲಿ ವಿರೋಧವಿರುವ ಶ್ರೀ ಸತೀಶ ಜಾರಕಿಹೊಳಿ ಅವರು ಖಂಡಿತ ಮುಂದಿನ ಚುನಾವಣೆಯಲ್ಲಿ ಯಶವನ್ನು ಕಾಣುವರು. ಇವರಲ್ಲದೆ ಡಾ ಭೀಮಶಿ ಜಾರಕಿಹೊಳಿ ಮತ್ತು ಶ್ರೀ ಲಖನ ಜಾರಕಿಹೊಳಿ ಅವರು ಸಹ ರಾಜಕೀಯ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ.

ಶ್ರೀ ಸತೀಶ ಜಾರಕಿ ಹೋಳಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದ ಉತ್ತರ ಕರ್ನಾಟಕದ ಅತ್ಯಂತ ಪ್ರಗತಿಪರ ಮತ್ತು ಪ್ರಭಾವಿ ರಾಜಕಾರಣಿ  ಸಾಮಾಜಿಕ ಬದ್ಧತೆ ಬುದ್ಧ ಬಸವ ಅಂಬೇಡ್ಕರವಾದವನ್ನು ಪ್ರತಿಪಾದಿಸುವ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರಾಜಕಾರಣ ಮಾಡುವ ಗುಣ ಮಟ್ಟದ ಮತ್ತು  ಕ್ರಿಯಾಶೀಲ ರಾಜಕಾರಣಿ. ಇವರು ಸಿದ್ಧು ಸರಕಾರದಲ್ಲಿ ಮತ್ರಿಗಳಾಗಿ ಹಲವು ಜನಪರ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ. ಯಮಕನ ಮರಡಿ ಚುನಾವಣೆಯು ಕೂಡ ಕಾಂಗ್ರೆಸಿಗೆ ವಾರವಾಗಲಿದೆ. 

Edited By

venki swamy

Reported By

Madhu shree

Comments