ಪ್ರಧಾನಿಯವರನ್ನು 'ಬಿಳಿಗಡ್ಡದ ಮುದುಕ' ಎಂದು ಕಾಂಗ್ರೆಸ್ಸಿನ ಮುಖಂಡ ಲೇವಡಿ

27 Dec 2017 3:53 PM | Politics
601 Report

ಬಿಜೆಪಿ ಸರಕಾರದ ನೋಟ್ ಬ್ಯಾನ್ ಕ್ರಮವನ್ನು ಪರೋಕ್ಷವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ ತಿವಾರಿ, ಬಿಳಿಗಡ್ಡದ ಮನುಷ್ಯನೋರ್ವ ನಿಮ್ಮ ಮನೆಗೆ ಬಂದು ನಿಮ್ಮಲ್ಲಿರುವ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾನೆಂದು, ಮೋದಿಯವರ ವಿರುದ್ದ ಕಿಡಿಕಾರಿದ್ದಾರೆ.

 ಬಿಜೆಪಿ ಸರಕಾರದ ನೋಟ್ ಬ್ಯಾನ್ ಕ್ರಮವನ್ನು ಪರೋಕ್ಷವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ ತಿವಾರಿ, ಬಿಳಿಗಡ್ಡದ ಮನುಷ್ಯನೋರ್ವ ನಿಮ್ಮ ಮನೆಗೆ ಬಂದು ನಿಮ್ಮಲ್ಲಿರುವ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾನೆಂದು, ಮೋದಿಯವರ ವಿರುದ್ದ ಕಿಡಿಕಾರಿದ್ದಾರೆ. ಮನೀಶ್ ತಿವಾರಿಯವರ ಈ ಟ್ವೀಟ್ ಸುಮಾರು ಮೂರು ಸಾವಿರ ಲೈಕ್, 1,200 ರಿಟ್ವೀಟ್ ಪಡೆದುಕೊಂಡಿದೆ. ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ವಕ್ತಾರ ಮನೀಶ್ ತಿವಾರಿ, ಪ್ರಧಾನಿಯವರನ್ನು ಕೆಣಕುವ ಟ್ವೀಟ್ ಮಾಡಿದ್ದಾರೆ. ಮೋದಿ ಹೆಸರನ್ನು ಪ್ರಸ್ತಾವಿಸದೇ ಪ್ರಧಾನಿಯವರನ್ನು 'ಬಿಳಿಗಡ್ಡದ ಮುದುಕ' ಎಂದು ತಿವಾರಿ ಲೇವಡಿ ಮಾಡಿದ್ದಾರೆ.

Edited By

Suresh M

Reported By

Madhu shree

Comments