ಟಿಕೆಟ್​ ವಿಚಾರದಲ್ಲಿ ಗೌಡರ ಕುಟುಂಬದೊಳಗೆ ಮುಸುಕಿನ ಗುದ್ದಾಟ

22 Dec 2017 11:53 AM | Politics
424 Report

ಟಿಕೆಟ್​ ವಿಚಾರದಲ್ಲಿ ದೇವೇಗೌಡರ ಕುಟುಂಬದೊಳಗೆ ಮುಸುಕಿನ ಗುದ್ದಾಟ ಶುರುವಾಗಿದೆ. ಪ್ರಜ್ವಲ್​ಗೆ ಪಕ್ಷದಲ್ಲಿ ಜವಾಬ್ದಾರಿ ವಹಿಸಲಾಗಿದೆ, ಅನಿತಾ ರಾಮನಗರ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಬೇಕು. ಪ್ರಜ್ವಲ್​, ಅನಿತಾ ಇಬ್ಬರೂ ಪಕ್ಷಕ್ಕಾಗಿ ದುಡಿದಿದ್ದಾರೆ. ಟಿಕೆಟ್​ ಕೊಟ್ಟರೆ ತಪ್ಪೇನು ಅನ್ನೋದು ದೇವೇಗೌಡರ ವಾದ. ಇದೇ ಕಾರಣಕ್ಕೆ ಕುಮಾರಸ್ವಾಮಿ, ದೇವೇಗೌಡ ನಡುವೆ ಸಣ್ಣ ವೈಮನಸ್ಸು ಶುರುವಾಗಿದೆ. ಇದೇ ಕಾರಣಕ್ಕೆ ಪ್ರಥಮ ಪಟ್ಟಿ ಬಿಡುಗಡೆಯೂ ವಿಳಂಬವಾಗುತ್ತಿದೆಯಂತೆ.

ಟಿಕೆಟ್​ ವಿಚಾರವಾಗಿ ಎಚ್​ಡಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ನಡುವೆ ವೈಮನಸ್ಸು ಉಂಟಾಗಿದೆ . ಯಾವುದೇ ಕಾರಣಕ್ಕೂ ಕುಟುಂಬದಲ್ಲಿ ಇಬ್ಬರೇ ಸ್ಪರ್ಧೆ ಮಾಡಲಿ ಎಂದು ಕುಮಾರಸ್ವಾಮಿ ಹೇಳುತ್ತಿದ್ದರೆ, ಅರ್ಹತೆ ಇದ್ದರೆ ಮತ್ತಿಬ್ಬರಿಗೆ ಟಿಕೆಟ್​ ಕೊಟ್ಟರೆ ತಪ್ಪೇನು ಎನ್ನುತ್ತಿದ್ದಾರಂತೆ ದೇವೇಗೌಡರು. ಅನಿತಾ ಕುಮಾರಸ್ವಾಮಿ, ಪ್ರಜ್ವಲ್​ ರೇವಣ್ಣ ಅವರಿಗೆ ಟಿಕೆಟ್​ ಬೇಡ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರಂತೆ, ಕುಟುಂಬದಿಂದ ನಾಲ್ವರು ಸ್ಪರ್ಧಿಸಿದರೆ ಕುಟುಂಬ ರಾಜಕಾರಣ ಆರೋಪಕ್ಕೆ ಗುರಿಯಾಗಬೇಕಾಗತ್ತದೆ . ಕಾಂಗ್ರೆಸ್​, ಬಿಜೆಪಿಗೆ ಇದು ದೊಡ್ಡ ಅಸ್ತ್ರವಾಗತ್ತೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರಂತೆ.

 

Edited By

Suresh M

Reported By

Madhu shree

Comments