ಕುಮಾರಣ್ಣ ಮನಸ್ಸು ಮಾಡಿದ್ರೆ, ಈ ಬಾರಿ ಪೂಜಾರಿ ಕಣಕ್ಕಿಳಿಯುವುದು ಖಚಿತ

18 Dec 2017 12:53 PM | Politics
392 Report

ಈ ಬಾರಿ ಎ. ಶಿವನಗೌಡ ನಾಯಕ್ ಹಣಿಯಲು ಕುಮಾರಣ್ಣ ಮನಸ್ಸು ಮಾಡಿದ್ರೆ, ಈ ಬಾರಿ ಜೆಡಿಎಸ್ನಿಂದ ಪೂಜಾರಿ ಕಣಕ್ಕಿಳಿಯುವುದು ಖಚಿತ. ಏಕೆಂದ್ರೆ ಹಾಲಿ ಶಾಸಕರಾದ ಶಿವಣ್ಣ 2008ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದು ಜಯಸಾಧಿಸಿದ್ದರು.

ಆ ಸಂದರ್ಭದಲ್ಲಿ ಆಪರೇಷನ್​ ಕಮಲಕ್ಕೆ ಬಲಿಯಾಗಿ ಎನ್ನುವುದಕ್ಕಿಂತ ರಾಜಕೀಯ ಬೆಳವಣಿಗೆಗಾಗಿ ಜೆಡಿಎಸ್​ಗೆ ಮೋಸ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಷ್ಟೇ ಅಲ್ಲಾ ಜೆಡಿಎಸ್​ನಿಂದ ಆಯ್ಕೆಯಾದ 36ರೇ ದಿನದೊಳಗೆ ರಾಜಿನಾಮೆ ಕೊಟ್ಟು ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಮಾತುಗಳೂ ಸಹ ಕ್ಷೇತ್ರದಲ್ಲಿ ಹರಿದಾಡುತ್ತಿತ್ತು. ಇಷ್ಟೆಲ್ಲಾ ಮಾಡಿದ ಎ. ಶಿವನಗೌಡ ನಾಯಕ್​ ಮೇಲೆ ಕುಮಾರಸ್ವಾಮಿಯವರು ಏನಾದರು ತಮ್ಮ ಕೋಪವನ್ನು ಈ ಚುನಾವಣೆಯಲ್ಲಿ ವೆಂಕಟೇಶ್​ ಪೂಜಾರಿಗೆ ಟಿಕೆಟ್​ ನೀಡಿ ಶಮನ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಸಹ ಇವೆ.

ಇದಿಷ್ಟು ಬಿಜೆಪಿ ಜೆಡಿಎಸ್​ ವಕ್ಕಣೆ ಆದ್ರೆ, ಕಾಂಗ್ರೆಸ್​ ಪಾಳಯದಲ್ಲಿ ಯಾವುದೇ ಅಸಮಾಧಾನವಿಲ್ಲದೆ, ರಾಜಶೇಖರ್​ ನಾಯಕ್​ ಟಿಕೆಟ್​ ವಿಚಾರದಲ್ಲಿ ಆರಾಮವಾಗಿದ್ದಾರೆ ಎಂದೇ ಹೇಳಬೇಕು. ಹಾಗಂತ ಯಾವುದೇ ತೊಂದರೆ ಇಲ್ಲ ಎಂದೇನಿಲ್ಲ. ಈ ಕ್ಷೇತ್ರದಲ್ಲಿ ಸಂಸದ ಬಿ ವಿ ನಾಯಕ್​ ಅಲೆ ಹೆಚ್ಚಾಗಿದ್ದು, ಕಾಂಗ್ರೆಸ್​ ಈ ಕ್ಷೇತ್ರದಲ್ಲಿ ತಾವೇ ನಿಲ್ಲಬೇಕು ಎಂದು ದುಂಬಾಲು ಬಿದ್ದಿದೆಯಂತೆ. ಆದರೆ ಸಂಸದ ಬಿ ವಿ ನಾಯಕ್​ ರಾಜಶೇಖರ್​ ನಾಯಕ್ರ ಅಣ್ಣನಾಗಿದ್ದು, ಈ ಕ್ಷೇತ್ರದಲ್ಲಿ ತಮ್ಮ, ತಮ್ಮ ​ ರಾಜಶೇಖರ್​ ನಾಯಕ್​ಗೆ ಟಿಕೆಟ್​ ನೀಡುವಂತೆ ಮನವೊಲಿಸುವುದರ ಜೊತೆಗೆ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಶಪಥ ಮಾಡಿದ್ದಾರಂತೆ. ಒಟ್ಟಾರೆ ಈ ದೇವದುರ್ಗ ವಿಧಾನಸಭಾ ಕ್ಷೇತ್ರ ಕುಟುಂಬ ರಾಜಕಾರಣದ ಪಾರುಪತ್ಯ ಮೆರೆಯುತ್ತಿರುವುದರ ಜೊತೆಗೆ,  ಯಾವ ಪಕ್ಷಗಳೂ ಕೂಡ ಕುಟುಂಬ ರಾಜಕಾರಣದ ಸದಸ್ಯರಿಗೆ ಬಿಟ್ಟು ಹೊಸ ಮುಖಗಳಿಗೆ ಟಿಕೆಟ್​ ನೀಡದೇ ಇರುವುದು ಈ ಎಲ್ಲಾ ಕುಟುಂಬ ರಾಜಕಾರಣದ ಪಾರುಪತ್ಯಕ್ಕೆ ಕಾರಣವಾಗಿದೆ.

Edited By

Hema Latha

Reported By

Madhu shree

Comments