ಎಚ್.ಡಿ.ಕುಮಾರಸ್ವಾಮಿ- ಎಚ್ .ಡಿ ರೇವಣ್ಣನವರ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಣೆ.!

15 Dec 2017 1:55 PM | Politics
422 Report

ಹಿರಿಯೂರು ತಾಲ್ಲೂಕು ಯುವ ಜನತಾದಳ(ಜಾತ್ಯತೀತ) ಪಕ್ಷದ ವತಿಯಿಂದ ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಮಾಜಿ ಮುಖ್ಯಮಂತ್ರಿ ಮತ್ತು ಜನತಾದಳ ಜಾತ್ಯಾತೀತ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವರು ಹಾಲಿ ಶಾಸಕರೂ ಆಗಿರುವ ಶ್ರೀ ಹೆಚ್.ಡಿ. ರೇವಣ್ಣರವರ ಹುಟ್ಟುಹಬ್ಬದ ಪ್ರಯುಕ್ತ ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು,ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು . ಜಿಲ್ಲಾಧ್ಯಕ್ಷರಾದ ಡಿ ಯಶೋಧರ್ ರವರು ಸೇರಿದಂತೆ ಪಕ್ಷದ ಮುಖಂಡರು,ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Edited By

Hema Latha

Reported By

Madhu shree

Comments