ಕರಾವಳಿಯಲ್ಲಿನ ಗಲಭೆಗೆ ಬಿಜೆಪಿಯೇ ಕಾರಣ : ಸಿದ್ಧರಾಮಯ್ಯ

15 Dec 2017 1:09 PM | Politics
357 Report

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಸ್ತ ಸಾವಿನ ಪೋಸ್ಟ್ ಮಾರ್ಟಂ ವರದಿ, ತನಿಖಾ ವರದಿಯ ಮೇಲೆ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಆದರೆ ಬಿಜೆಪಿಯವರು ತಾವೇ ಸರ್ಟಿಫಿಕೇಟ್ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಿಜೆಪಿಯವರು ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ. ಹೀಗಾಗಿ ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲಿಂಗಾಯತರ ಧರ್ಮದ ವಿಚಾರದಲ್ಲಿ ನಮ್ಮದೇನೂ ಪಾತ್ರವಿಲ್ಲ. ಅಲ್ಪಸಂಖ್ಯಾತ ಧರ್ಮದ ಪಟ್ಟಿಯಲ್ಲಿ ಸೇರಿಸಲು ಐದು ಮನವಿ ಪತ್ರ ಬಂದಿವೆ ಎಂದು ತಿಳಿಸಿದರು.

Edited By

Hema Latha

Reported By

Madhu shree

Comments