ರಾಜಕೀಯದಲ್ಲಿ 'ರಿಯಲ್‌ ಸ್ಟಾರ್‌' ಪ್ರಯೋಗ

11 Dec 2017 2:55 PM | Politics
321 Report

ಎಲ್ಲರಿಗೂ ಈಗಿರುವ ರಾಜಕೀಯ ವ್ಯವಸ್ಥೆ ಬೇಸತ್ತು ಹೋಗಿದೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ. ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ. ಸಾಕಷ್ಟು ಜನರು ನನಗೆ ಕೈಜೋಡಿಸುತ್ತಿದ್ದಾರೆ. ಕೇವಲ 20ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ ಹಾಗೂ ಶೇ.80ರಷ್ಟು ಜನರು ಸುಮ್ಮನಾಗಿದ್ದೇವೆ.

ಮೈಕ್ರೋ ಲೆವೆಲ್ ಪ್ಲ್ಯಾನಿಂಗ್ ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ. ಜನವರಿ ಅಂತ್ಯದಲ್ಲಿ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶವಿದೆ. ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡುತ್ತೇವೆ ಎಂದು ಅವರು ಹೇಳಿದರು. ನಟ ಉಪೇಂದ್ರ ಅವರನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾದ ಕಾರಣ ವೇಳೆ ಮಿಲನ್ ಹೋಟೆಲ್‌ನ ದ್ವಾರದ ಗಾಜು ಪುಡಿ ಪುಡಿಯಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. 

Edited By

Hema Latha

Reported By

Madhu shree

Comments