ಅನಿತಾ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಬಗ್ಗೆ ನೀತಿಪಾಠ ಹೇಳಿದ ದೇವೇಗೌಡರು

11 Dec 2017 1:47 PM | Politics
518 Report

2018 ರ ವಿಧಾನಸಭಾ ಚುನಾವಣೆ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ವಿಚಾರ, ಜೆಡಿಎಸ್ ಹಿರಿಯ ಮುಖಂಡರು ಅನಿತಾ ಅವರನ್ನೇ ಚನ್ಣಪಟ್ಟಣದಿಂದ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು. ಆ ಸಂದರ್ಭದಲ್ಲಿ ದೇವೇಗೌಡರು ಮುಖಂಡರಿಗೆ ವೇದಿಕೆಯಲ್ಲಿಯೇ ನೀತಿಪಾಠ ಹೇಳಿದರು.

ನಮ್ಮ ಮೇಲೆ ಈಗಾಗಲೇ ಕುಟುಂಬ ರಾಜಕಾರಣದ ಅಪವಾದ ಸುತ್ತಿಕೊಂಡಿದೆ ಇದೀಗ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲು ಅಸಾಧ್ಯ ಎಂದರು.ಅನಿತಾ ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ ಈ ಬಾರಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಸಹ ಹೊಂದಿದ್ದಾರೆ. ಹಳ್ಳಿ ಹಳ್ಳಿಗೆ ನೀವು ಹೋಗಿ, ಅನಿತಾ ಬಂದರೆ ಜೊತೆಗೆ ಕರೆದುಕೊಂಡು ಹೋಗಿ ಅಂತಾ ಸ್ಥಳೀಯ ಮುಖಂಡರಿಗೆ ಹೇಳಿದ್ದೇನೆ. ಅಂತಿಮ ನಿರ್ಧಾರ ಆ ಮೇಲೆ ಮಾಡೋಣ ಎಂದು ಹೇಳಿದರು.



Edited By

Hema Latha

Reported By

Madhu shree

Comments