ಸಿಎಂ ಸಿದ್ದರಾಮಯ್ಯರನ್ನು ಸುದೀಪ್ ಭೇಟಿ ಮಾಡಿರುವುದು ಕುತೂಹಲಕ್ಕೀಡಾಗಿದೆ

11 Dec 2017 12:18 PM | Politics
390 Report

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವರ ಅಧಿಕೃತ ನಿವಾಸದಲ್ಲಿ ನಟ ಸುದೀಪ್ ಇಂದು ಭೇಟಿ ಮಾಡಿದ್ದಾರೆ.  ಚುನಾವಣಾ ಹೊಸ್ತಿಲಲ್ಲೇ ಸಿಎಂ-ಸುದೀಪ್​ ಭೇಟಿ ಕುತೂಹಲ ಕೆರಳಿಸಿದೆ. ಸುಮಾರು 45 ನಿಮಿಷಗಳ ಕಾಲ ಸಿಎಂ ಜೊತೆ ಸುದೀಪ್ ಚರ್ಚೆ ನಡೆಸಿದ್ದಾರೆ.  ​

ವಿಷ್ಣು ಸ್ಮಾರಕದ ಕುರಿತು ಸಿಎಂ ಜೊತೆ  ಚರ್ಚೆ ನಡೆಸಿದ ಸುದೀಪ್, ವಿಷ್ಣುವರ್ಧನ್ ರವರ ಸಮಾಧಿ ಸ್ಥಳಾಂತರ ಬೇಡ ಎಂದು ಮನವಿ ಮಾಡಿದ್ದಾರೆ. ವಿಷ್ಣು ಸ್ಮಾರಕ ಎಲ್ಲಿ ಬೇಕಾದರೂ ನಿರ್ಮಿಸಲಿ ಆದರೆ ಸಮಾಧಿ ಸ್ಥಳ ಸ್ಥಳಾಂತರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Edited By

Hema Latha

Reported By

Madhu shree

Comments