ಉತ್ತರಕನ್ನಡದ ಶಿರಸಿಗೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

08 Dec 2017 2:09 PM | Politics
443 Report

ಕೆಪಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಉಪೇಂದ್ರ ಅವರು ಇಂದು ಉತ್ತರಕನ್ನಡದ ಶಿರಸಿಗೆ   ಭೇಟಿ ನೀಡಿದ್ದಾರೆ. ಕೆಪಿಜೆಪಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಶಿರಸಿಗೆ ಆಗಮಿಸಿದ್ದು, ಶಿರಸಿಯ ಹೆಗ್ಗುರುತು ಟಿಎಸ್ ಎಸ್ ಮಾರ್ಕೇಟ್ ವೀಕ್ಷಿಸಿ ಟಿಎಸ್ ಎಸ್ ಕಾರ್ಯವೈಖರಿಯನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಸತ್ಯ ಸಾಯಲ್ಲ, ಸತ್ಯನೇ ಗೆಲ್ಲೋದು ಎಂದಿರುವ ಚಲನಚಿತ್ರ ನಟ ಹಾಗೂ ಕೆಪಿಜೆಪಿ ಪಾರ್ಟಿ ಸಂಸ್ಥಾಪಕ ಉಪೇಂದ್ರ ಸ್ಮಾರ್ಟ್ ಆಗಿ ಪಕ್ಷ ಬಲಪಡಿಸುವುದಾಗಿ ಹೇಳಿದ್ದಾರೆ ಎಂದು ಉಡುಪಿಯಲ್ಲಿ ಮಾತನಾಡಿದ ಉಪೇಂದ್ರ, ಇಂದು ಉತ್ತರಕನ್ನಡದ ಶಿರಸಿಗೆ ಭೇಟಿ ನೀಡಿದ್ದಾರೆ. ಇನ್ನು ಉಪ್ಪಿ ನೋಡಲು ಜನರು ಮುಗಿಬಿದ್ದಿದ್ದಾರೆ. 

Edited By

Hema Latha

Reported By

Madhu shree

Comments