ತೀವ್ರ ಹೋರಾಟದ ಬಳಿಕ ನಟ ವಿಶಾಲ್ ನಾಮಪತ್ರ ಅಂಗೀಕಾರ

06 Dec 2017 11:37 AM | Politics
250 Report

'ಆರ್.ಕೆ. ನಗರ ಉಪ ಚುನಾವಣೆಗೆ ನನ್ನ ನಾಮಪತ್ರವನ್ನು ಅಂಗೀಕರಿಸಲಾಗಿದೆ, ಸತ್ಯಕ್ಕೆ ವಿಜಯೋತ್ಸವ' ಎಂದು ವಿಶಾಲ್ ಹೇಳಿದ್ದಾರೆ. ವಿಶಾಲ್ ಮತ್ತು ಜಯಲಲಿತಾ ಅವರ ಸಂಬಂಧಿ ದೀಪಾ ಜಯಕುಮಾರ್ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು. 

ಇದು ರಾಜಕೀಯ ಮಾರಾಟ ಎಂದು ದೀಪಾ ಜಯಕುಮಾರ್ ಟೀಕಿಸಿದ್ದರು. ಆದರೆ, ವಿಶಾಲ್ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಹೈಡ್ರಾಮವೇ ನಡೆದಿತ್ತು. ಹೈಡ್ರಾಮದ ಬಳಿಕ ಚುನಾವಣಾಧಿಕಾರಿಗಳು ಮರು ಪರಿಶೀಲನೆ ನಡೆಸಿ, ವಿಶಾಲ್ ನಾಮಪತ್ರವನ್ನು ಅಂಗೀಕರಿಸಿದ್ದಾರೆ.

Edited By

Hema Latha

Reported By

Madhu shree

Comments