'ಕಾಂಗ್ರೆಸ್ ಜನಾರ್ಶೀವಾದ್ ಯಾತ್ರೆ' ಡಿಸೆಂಬರ್ 13ರಂದು

04 Dec 2017 10:15 PM | Politics
167 Report

ಬೆಂಗಳೂರು: ಜೆಡಿಎಸ್ ನ ಕುಮಾರ ಪರ್ವ ಯಾತ್ರೆ, ಬಿಜೆಪಿ ಪರಿವರ್ತನಾ ಯಾತ್ರೆಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ಧವಾಗಿದೆ. ಕಾಂಗ್ರೆಸ್ ನಲ್ಲಿ ಚುನಾವಣಾ ಪೂರ್ವ ಚಟುವಟಿಕೆಗಳು ಗರಿಗೆದರಿವೆ

ಬೆಂಗಳೂರು: ಜೆಡಿಎಸ್ ನ ಕುಮಾರ ಪರ್ವ ಯಾತ್ರೆ, ಬಿಜೆಪಿ ಪರಿವರ್ತನಾ ಯಾತ್ರೆಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ಧವಾಗಿದೆ. ಕಾಂಗ್ರೆಸ್ ನಲ್ಲಿ ಚುನಾವಣಾ ಪೂರ್ವ ಚಟುವಟಿಕೆಗಳು ಗರಿಗೆದರಿವೆ. ಅಸಂಬ್ಲಿ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಚಿತ್ರ ಯಾತ್ರೆ ಮೇಲೆ ಆರಂಭವಾಗಿದೆ. ಡಿಸೆಂಬರ್ 13ರಂದು ಜನಾರ್ಶೀವಾದ ಯಾತ್ರೆ ಯನ್ನು ಕಾಂಗ್ರೆಸ್ ಕೆಲ ಜಿಲ್ಲೆಗಳಲ್ಲಿ ಆರಂಭಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಾದರ್ಶೀವಾದ ಯಾತ್ರೆ ನಡೆಯಲಿದೆ. ಇದೇ ಡಿಸೆಂಬರ್ 13ರಿಂದ 18ರವರೆಗೆ ಕಾಂಗ್ರೆಸ್ ಯಾತ್ರೆ ನಡೆಯಲಿದೆ. 13ರಂದು ಬೀದರ್ ನ ಬಸವ ಕಲ್ಯಾಣದಿಂದ ಪ್ರಾರಂಭವಾಗುವ ಯಾತ್ರೆ, ಡಿಸೆಂಬರ್ 18ರಂದು ಬಳ್ಳಾರಿಗೆ ಬರಲಿದೆ. ಬಸವಕಲ್ಯಾಣ, ರಾಯಚೂರು, ಕೊಪ್ಪಳ, ಕಲಬುರಗಿ , ಯಾದಗಿರಿ ಹಾಗೂ ಬಳ್ಳಾರಿ ಗಳಲ್ಲಿ ಕಾಂಗ್ರೆಸ್ ನ ಜನಾರ್ಶೀವಾದ್ ಯಾತ್ರೆ ನಡೆಯಲಿದೆ.

Edited By

venki swamy

Reported By

Sudha Ujja

Comments