ಡಿಕೆಶಿಗೆ ಮೋದಿ- ಶಾ ಭಯ ಕಾಡುತಿದ್ಯಾ ?
ಹೈಕಮಾಂಡ್ ನಿಂದ ಪಕ್ಷದ ಪ್ರಚಾರಕ್ಕೆ ಆಹ್ವಾನ ಬಂದರೂ ಗುಜರಾತ್ ಗೆ ನಾನು ಬರಲ್ಲ ಎಂದು ನೇರವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ದೇಶದ ಬೇರೆ ಬೇರೆ ರಾಜ್ಯದ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಡಿಕೆಶಿ ಇದೀಗ ಗುಜರಾತ್ ಶಾಸಕರು ಕರೆದರೂ ಪ್ರಚಾರಕ್ಕೆ ಹೋಗದ ಪರಿಸ್ಥಿತಿ ಉಂಟಾಗಿದೆ.
ಇದೆಲ್ಲಾ ಐಟಿ ದಾಳಿಯ ಎಫೆಕ್ಟ್ ಎಂದು ಮೇಲ್ನೋಟಕೆ ತಿಳಿದು ಬಂದಿದೆ. ಐಟಿ ದಾಳಿ ನಡೆದ ಬಳಿಕ ಡಿಕೆಶಿಗೆ ಮೋದಿ- ಶಾ ಭಯ ಕಾಡುತ್ತಿದೆ. ಹೀಗಾಗಿ ಮತ್ತೇ ಮತ್ತೇ ರಿಸ್ಕ್ ಯಾಕೆ ಅಂತ ಗುಜರಾತ್ ಕಡೆಗೆ ತಲೆ ಹಾಕದೆ ಸೈಲೆಂಟಾಗಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
Comments