ಯಡಿಯೂರಪ್ಪ ಅವರ ಆರೋಪಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು

27 Nov 2017 1:44 PM | Politics
231 Report

ಬೇಕಿದ್ದರೆ ಯಡಿಯೂರಪ್ಪ ಅವರು ಹೇಳಿದ ದಿನಾಂಕದಂದು ನಾವು ಒಪ್ಪಂದ ಮಾಡಿಕೊಳ್ಳಲು ತಯಾರಿದ್ದೇವೆ. ಬೇಕಿದ್ದರೆ ಅನಂತಕುಮಾರ್ ಅವರು ನಿಯೋಗದ ನೇತೃತ್ವ ವಹಿಸಲಿ ಎಂದರು.

2.50ಗೆ ಯೂನಿಟ್ನಂತೆ ವಿದ್ಯುತ್ ಖರೀದಿಗೆ ಲಭ್ಯವಿದ್ದರೂ ಕರ್ನಾಟಕ ಸರ್ಕಾರ ಖರೀದಿ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆರೋಪಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಅಷ್ಟು ಕಡಿಮೆ ದರದಲ್ಲಿ ವಿದ್ಯುತ್ ದೊರೆಯುತ್ತದೆ ಎಂಬುದಾದರೆ ಬೇರೆಡೆ ಖರೀದಿಸುವ ಒಪ್ಪಂದಗಳನ್ನು ರದ್ದು ಮಾಡುತ್ತೇವೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಒಪ್ಪಿಗೆ ಪಡೆದೇ ಸದ್ಯಕ್ಕೆ ಪ್ರತಿ ಯೂನಿಟ್ಗೆ 5.08ನಂತೆ ವಿದ್ಯುತ್ ಖರೀದಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರಕ್ಕೆ ಶೇ 27, ರಾಯಚೂರು ಸ್ಥಾವರಕ್ಕೆ ಶೇ 48ರಷ್ಟು ಕಲ್ಲಿದ್ದಲು ಕೊರತೆ ಇದೆ ಎಂದರು.

Edited By

Hema Latha

Reported By

Madhu shree

Comments