ಪಾಪ ಮಾಡಿದವರಿಗೆ ದೇವರು ಕ್ಯಾನ್ಸರ್ ಶಿಕ್ಷೆ ಕೊಡ್ತಾರೆ : ಅಸ್ಸಾಂ ಆರೋಗ್ಯ ಸಚಿವ

23 Nov 2017 12:18 PM | Politics
392 Report

ನಾವು ಪಾಪ ಮಾಡಿದರೆ ದೇವರು ನಮಗೆ ಶಿಕ್ಷೆಯನ್ನು ನೀಡುತ್ತಾರೆ. ಕೆಲವರು ಪ್ರಾಯದಲ್ಲಿದ್ದಾಗಲೇ ಕ್ಯಾನ್ಸರ್ ರೋಗದಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರು ಅತೀ ಸಣ್ಣ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಇಂತಹ ವ್ಯಕ್ತಿಗಳ ಹಿನ್ನಲೆಯನ್ನು ನೋಡಿದರೆ ಇವೆಲ್ಲಾ ದೈವಿಕ ನ್ಯಾಯಾಲಯ ನೀಡಿರುವ ನ್ಯಾಯ ಎಂಬುದು ನಮಗೆ ತಿಳಿಯುತ್ತದೆ ಎಂದು ಹಿಮಾಂತ ಬಿಸ್ವ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೈವಿಕ ನ್ಯಾಯಾಲಯ ನೀಡುವ ನ್ಯಾಯವನ್ನು ನಾವು ಸ್ವೀಕರಿಸಲೇಬೇಕು ಎಂದು ತಿಳಿಸಿದ್ದಾರೆ. 

Edited By

Hema Latha

Reported By

Madhu shree

Comments