ರಾಹುಲ್ ಪರ ರಮ್ಯಾ ಟ್ವಿಟರ್ ವಾರ್

23 Nov 2017 11:21 AM | Politics
430 Report

ಕಾಶಿ ವಿಶ್ವನಾಥ ದೇವಾಲಯಕ್ಕೆ ಬಂದಿದ್ದಾಗ ರಾಹುಲ್ ಗೆ ದೇವರ ಪ್ರಾರ್ಥನೆಗೆ ಹೇಗೆ ಕೂರಬೇಕೆಂದೇ ಗೊತ್ತಿರಲಿಲ್ಲ. ಕೊನೆಗೆ ಅರ್ಚಕರು ಇದು ದೇವಾಲಯ ಮಸೀದಿ ಅಲ್ಲ. ನಮಾಜ್ ಗೆ ಕೂರುವಂತೆ ಕೂರಬೇಡಿ ಎಂದು ಹೇಳಬೇಕಾಯಿತು ಎಂದು ಸಿಎಂ ಯೋಗಿ ಕಾಲೆಳೆದಿದ್ದರು. ಇದ್ದಕ್ಕೆ ರಮ್ಯಾ ಪ್ರತಿ ಉತ್ತರ ನೀಡಿದ್ದಾರೆ.

ಇದಕ್ಕೆ ಉತ್ತರವಾಗಿ ಟ್ವೀಟ್ ಮಾಡಿರುವ ರಮ್ಯಾ ‘ಮತ್ತೆ ದೇವರು ಹೇಳಿದ್ರು ಯೋಗಿ ಆದಿತ್ಯನಾಥ್ ಸುಳ್ಳುಗಾರ ಎಂದು’ ಎಂದಿದ್ದಾರೆ. ಇದಕ್ಕೆ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆಗೆ ಕೂರಲು ಗೊತ್ತಿರಲಿಲ್ಲ ಎಂದು ಟೀಕಿಸಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ವಿರುದ್ಧ ನಟಿ, ಮಾಜಿ ಸಂಸದೆ ರಮ್ಯಾ ವ್ಯಂಗ್ಯವಾಡಿದ್ದಾರೆ.

 

Edited By

Hema Latha

Reported By

Madhu shree

Comments