ಅಟ್ಟಹಾಸ ಮೆರೆದ ಮಗನ ಬಗ್ಗೆ ಶಾಸಕ ಮಹೇಶ್ ಏನ್ ಹೇಳಿದ್ರು ?

22 Nov 2017 12:33 PM | Politics
330 Report

ಮಕ್ಕಳು ಮಾಡೋ ತಪ್ಪುಗಳನ್ನ ಸಮರ್ಥಿಸಿಕೊಳ್ಳೋ ಈ ಕಾಲದಲ್ಲಿ ಶಾಸಕ ಸಾ.ರಾ.ಮಹೇಶ ಒಬ್ಬ ತಂದೆಯಾಗಿ ತಮ್ಮ ಜವಾಬ್ಧಾರಿ ಮೆರೆದಿದ್ದಾರೆ. ಮಗ ಇರಲಿ, ಮೊಮ್ಮಗ ಇರಲಿ, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗ್ಬೇಕು ಅಂತಾ ಹೇಳುವ ಮೂಲಕ ಸಾ.ರಾ. ಮಹೇಶ್​ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದಾರೆ.

ಜಯಂತ್‌ ಮತ್ತು ತಂಡದಿಂದ ಥಳಿತಕ್ಕೊಳಗಾದ ಯುವಕ ಚಿನ್ನದ ಸರ ಕಳವು ಮಾಡಿದ್ದ ಎನ್ನಲಾಗಿದ್ದು, ಇದಕ್ಕಾಗಿ ಈ ರೀತಿ ಗೂಂಡಾವರ್ತನೆ ತೋರಲಾಗಿದೆ ಎಂದು ಹೇಳಲಾಗಿದೆ. ಜಯಂತ್‌ ಮತ್ತು ಗುಂಪಿನಿಂದ ಥಳಿತಕ್ಕೆ ಒಳಗಾದ ಯುವಕ ಪರಿ ಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲ. ಈ ಸಂಬಂಧ ದೇವರಾಜ ಠಾಣೆ ಪೊಲೀಸರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದ್ದರು ಎನ್ನಲಾಗಿದೆ.

Edited By

Hema Latha

Reported By

Madhu shree

Comments