ನಾಳೆ ಮೈಸೂರಿನಲ್ಲಿ ನಳ ನಳಿಸಲಿದೆ ಕುಮಾರ ಪರ್ವದ ಪತಾಕೆ

18 Nov 2017 12:40 PM | Politics
346 Report

ಚುನಾವಣಾ ಅಖಾಡದಲ್ಲಿ ಮಟ್ಟಿ ,ಮಣ್ಣನ್ನ  ಮೈಗೆರಚಿ ರಣಾಂಗಣದಲ್ಲಿ ರಂಗೇರಿ  ಸಂಚಲಿಸುತ್ತಿರುವ  ಕುಮಾರ ಪರ್ವ ಇದೀಗ  ಮಲ್ಲಿಗೆ ನಗರಿಯ ಚಾಮರಾಜ ಕ್ಷೇತ್ರಕ್ಕೆ ಕಾಲಿಟ್ಟಿದೆ.  ಹುಬ್ಬಳ್ಳಿಯಲ್ಲಿ  ಬೃಹತ್​ ಬಹಿರಂಗ ಸಮಾವೇಶದ ಜೊತೆಗೆ ರೋಡ್​ ಶೋ ಹಮ್ಮಿಕೊಂಡಿದ್ದು,  ಸಾಂಸ್ಕೃತಿಕ ನಗರೀಯಲ್ಲಿ  ತಮ್ಮ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಂಡಿದೆ.

ಇನ್ನೂ  ಈ ವಿಚಾರವನ್ನು ಚಾಮರಾಜ ನಗರ ಕ್ಷೇತ್ರದ ಮುಖಂಡರು ಮತ್ತು ಅಭ್ಯರ್ಥಿ ಎಂದು ಬಿಂಬಿತವಾಗಿರು ಮೈಸೂರಿನ ವಿಶ್ರಾಂತ ಕುಲಪತಿಯೂ ಆದ ಪ್ರೊ. ಕೆ.ಎಸ್​ ರಂಗಪ್ಪ   ಇತ್ತ ಚಾಮರಾಜ ಕ್ಷೇತ್ರದಲ್ಲಿ ಅಸಮಧಾನದ ಹೊಗೆಯೂ ಕೂಡ ಈ ಕಾರ್ಯಕ್ರಮಕ್ಕೆ ಕವಿಯುವ ಅನುಮಾನಗಳಿದ್ದು,  ಕ್ಷೇತ್ರದ  ಕಳೆದೆರಡು ಚುನಾವಣಾ ವರ್ಷಗಳಿಂದ ಟಿಕೆಟ್​ ಆಕಾಂಕ್ಷಿಯಾಗಿರುವ ಕೆಜಿ ಕೊಪ್ಪಲ್​ ಹರೀಶ್​ ರವರು  ಈ ಕಾರ್ಯಕ್ರಮದಿಂದ ದೂರ ಉಳಿದು ಕಾರ್ಯಕ್ರಮದ ಮೇಲೆ ವ್ಯತಿರಿಕ್ತ  ಪರಿಣಾಮ ಬೀರುವರೇ ಎಂದು ಕಾದು ನೋಡಬೇಕಿದೆ.

Edited By

Shruthi G

Reported By

Madhu shree

Comments