ಕಾಂಗ್ರೆಸ್ ಹಿರಿಯ ಶಾಸಕರಿಬ್ಬರು ಜೆಡಿಎಸ್ ನತ್ತ ಮುಖ

11 Nov 2017 11:38 AM | Politics
12036 Report

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಈಗಾಗಲೇ ತಯಾರಿ ನಡೆಸಿವೆ.ಕಾಂಗ್ರೆಸ್ ಪಕ್ಷದ ಇಬ್ಬರು ಹಿರಿಯ ಶಾಸಕರು ಅನ್ಯ ಪಕ್ಷಗಳತ್ತ ಚಿತ್ತ ಹರಿಸಿದ್ದಾರೆ.

6 ಬಾರಿ ಚುನಾಯಿತರಾಗಿರುವ ಅಫ್ಜಲ್ ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್, 5 ಬಾರಿ ಜಯಗಳಿಸಿರುವ ಯಾದಗಿರಿ ಶಾಸಕ ಡಾ. ಮಾಲಕರೆಡ್ಡಿ ಅವರು ಪಕ್ಷ ತೊರೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.5 -6 ಸಲ ಶಾಸಕರಾಗಿದ್ದರೂ, ಸಚಿವ ಸ್ಥಾನ ನೀಡದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದ ಇಬ್ಬರೂ ಚುನಾವಣೆ ವೇಳೆಗೆ ಪಕ್ಷ ತೊರೆಯಲಿದ್ದಾರೆ. ಜೆ.ಡಿ.ಎಸ್. ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಈ ಇಬ್ಬರೂ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕರಿಬ್ಬರು ಜೆ.ಡಿ.ಎಸ್. ಸೇರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Edited By

Shruthi G

Reported By

Shruthi G

Comments