ದೇಶದ್ರೋಹದ ಟೀಕೆಗೆ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ

30 Oct 2017 7:46 PM | Politics
316 Report

ಶ್ರೀನಗರ: ದೇಶದೊಳಗೆ ಇದ್ದುಕೊಂಡು ಸ್ವಾಯತತ್ತೆ ಬಗ್ಗೆ ಮಾತನಾಡಿದರೆ ಅದು ದೇಶದ್ರೋಹ ಎನ್ನುತ್ತಿದ್ದಾರೆ, ಭಾರತಗ ಸಂವಿಧಾನದಲ್ಲಿ ಸ್ವಾಯತತ್ತೆಯನ್ನು ಬಯಸುವುದೇ ದೇಶದ್ರೋಹ ಎಂದಾದರೆ ನನ್ನನ್ನು ದೇಶದ್ರೋಹಿಗಳು ಎಂದು ಕರೆಯಿರಿ ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇಲ್ಲಿ ಹೇಳಿದರು.

ಶ್ರೀನಗರ: ದೇಶದೊಳಗೆ ಇದ್ದುಕೊಂಡು ಸ್ವಾಯತತ್ತೆ ಬಗ್ಗೆ ಮಾತನಾಡಿದರೆ ಅದು ದೇಶದ್ರೋಹ ಎನ್ನುತ್ತಿದ್ದಾರೆ, ಭಾರತಗ ಸಂವಿಧಾನದಲ್ಲಿ ಸ್ವಾಯತತ್ತೆಯನ್ನು ಬಯಸುವುದೇ ದೇಶದ್ರೋಹ ಎಂದಾದರೆ ನನ್ನನ್ನು ದೇಶದ್ರೋಹಿಗಳು ಎಂದು ಕರೆಯಿರಿ ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇಲ್ಲಿ ಹೇಳಿದರು.

ಶನಿವಾರ ನ್ಯಾಷನಲ್ ಕಾನ್ಫರೆನ್ಸ್ ನ ಪ್ರತಿನಿಧಿಗಳ ಸಮ್ಮೇಳನದಲ್ಲಿ ಓಮರ್ ಮಾತನಾಡಿದ್ದಾರೆ. ಜಮ್ಮು ವಿನಲ್ಲಿ ವಾಸವಿರುವ ಜನರು ಹೆಚ್ಚಿನ ಸ್ವಾಯತತ್ತೆ ಬಯಸುತ್ತಿದ್ದಾರೆ. ನಾನು ನಡೆಸಿದ ಸಂವಾದಗಳಲ್ಲೂ ಈ ಪ್ರಸ್ತಾಪ ಕೇಳಿ ಬಂದಿವೆ, ಎಲ್ಲರೂ ಪ್ರತ್ಯೇಕತೆ ಪರವಾಗಿ ಇಲ್ಲ, ಆದರೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು ಎಂದು ಪಿ.ಚಿದಂಬರಂ ಹೇಳಿದ್ದರು. ಚಿದಂಬರಂ ಅವರ ಈ ಹೇಳಿಕೆ ಗೆ ಕೇಂದ್ರದ ಸಚಿವರಿಂದ ಭಾರೀ ಟೀಕೆಗಳು ಕೇಳಿ ಬಂದಿರುವುದಕ್ಕೆ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

 

Edited By

venki swamy

Reported By

Sudha Ujja

Comments