ಸಚಿವ ಯು.ಟಿ ಖಾದರ್ ಗೆ ಉಳ್ಳಾಲ ಮಂದಿ ಘೇರಾವ್

06 Oct 2017 10:32 PM | Politics
334 Report

ಉಳ್ಳಾಲ: ಸಾಮಾಜಿಕ ಕಾರ್ಯಕರ್ತ ಜುಬೈರ್ ಅವರ ಮನೆಗೆ ಇವತ್ತು ಸಂಜೆ ವೇಳೆ ಭೇಟಿಗೆ ಬಂದಿದ್ದ ಸಚಿವ ಯು.ಟಿ ಖಾದರ್ ಗೆ ಪ್ರತಿಭಟನೆಯ ಬಿಸಿ ತಟ್ಟಿದೆ.

ಉಳ್ಳಾಲ: ಸಾಮಾಜಿಕ ಕಾರ್ಯಕರ್ತ ಜುಬೈರ್ ಅವರ ಮನೆಗೆ ಇವತ್ತು ಸಂಜೆ ವೇಳೆ ಭೇಟಿಗೆ ಬಂದಿದ್ದ ಸಚಿವ ಯು.ಟಿ ಖಾದರ್ ಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಮುಕ್ಕಚೇರಿ ಎಂಬಲ್ಲಿ ಡಿವೈಎಫ್ ಐ ಸಂಘಟನೆಯ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಚಿವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.

ಪ್ರತಿಭಟನೆಯ ಘೇರಾವ್ ಬಿಸಿಗೆ ಸಚಿವರು ಅರ್ಧದಾರಿಯಲ್ಲೇ ಹಿಂದುರುಗಿದ ಘಟನೆಯು ನಡೆಯಿತು. ಇದರಿಂದ ಜುಬೈರ್ ಮನೆಗೆ
ಭೇಟಿ ನೀಡಲಾಗದೇ ಖಾದರ್ ಅವರು ಅರ್ಧದಲ್ಲೇ ಹಿಂದುರುಗುವಂತಾಯಿತು. ಈ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ದಂಧೆಯ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಿದ ಜುಬೈರ್ ಅವರನ್ನು ದುಷ್ಕರ್ಮಿಗಳು ಎರಡು ದಿನಗಳ ಹಿಂದೆ ನಡುರಸ್ತೆಯಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು.

 

 

Edited By

venki swamy

Reported By

Sudha Ujja

Comments