ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿಎಂ

28 Sep 2017 10:57 PM | Politics
512 Report

ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರನ್ನು ಇಂದು ಮುಖ್ಯಮಂತ್ರಿಗಳು ಆರೋಗ್ಯ ವಿಚಾರಿಸಿದರು. ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಶೀರ್ಘ ಗುಣ ಮುಖರಾಗುವಂತೆ ಹಾರೈಸಿದರು.

ಕಳೆದ ಸೆ.25ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಶಸ್ತ್ರ ಚಿಕಿತ್ಸೆ ಗೊಳಗಾಗಿದ್ದರು. ಹತ್ತು ವರ್ಷಗಳ ಮುಂಚೆ ಅಳವಡಿಸಲಾಗಿದ್ದ ಟಿಶ್ಯೂ ವಾಲ್ಟ್ ಅನ್ನು ಬದಲಾಯಿಸಲು ವೈದ್ಯರು ಸಲಹೆ ನೀಡಿದ್ದರು.

Edited By

venki swamy

Reported By

Sudha Ujja

Comments