ನಟ ಸುದೀಪ್ ಬರ್ತಾರಾ ಬಿಜೆಪಿಗೆ ?

01 Sep 2017 12:27 PM | Politics
418 Report

ರಾಜ್ಯ ರಾಜಕೀಯದಲ್ಲಿ ಸ್ಟಾರ್ ನಟರ ಸುತ್ತಲೂ ರಾಜಕಾರಣ ಗಿರಕಿ ಹೊಡೆಯುತ್ತಿದೆ. ಉಪ್ಪಿ ಆಯ್ತು, ದರ್ಶನ್ ಆಯ್ತು ಈಗ ಮತ್ತೊಬ್ಬ ಸ್ಟಾರ್ ನಟ ರಾಜಕೀಯಕ್ಕೆ ಬರ್ತಾರೆಂಬ ಸುದ್ದಿ ಹರಿದಾಡುತ್ತಿದೆ

ಕಾಂಗ್ರೆಸ್ ಯೋಜನೆಗೆ ತಿರುಗೇಟು ನೀಡಲು ಬಿಜೆಪಿಯೂ ಸಜ್ಜಾಗುತ್ತಿದ್ದು, ಕಿಚ್ಚ ಸುದೀಪ್‍ರನ್ನು ಕರೆಯಲು ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆ. ಬಿಜೆಪಿ ಸೇರಲು ನಟ ಕಿಚ್ಚ ಸುದೀಪ್ ಗೆ ಆಹ್ವಾನ ನೀಡಲು ಕಮಲ ಮನೆಯಲ್ಲಿ ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ಗೆ ದರ್ಶನ ಆದ್ರೆ ನಮ್ಗೆ ಸುದೀಪ್ ಅಂತಿದೆ ಬಿಜೆಪಿ ಪಕ್ಷ.

ಶ್ರೀರಾಮುಲು, ಆರ್.ಅಶೋಕ್ ಗೆ ಸುದೀಪ್ ಜೊತೆ ಮಾತುಕತೆ ನಡೆಸುವ ಜವಾಬ್ದಾರಿ ನೀಡಿದ್ದು, ಸುದೀಪ್ ಪಕ್ಷ ಸೇರಿದ್ರೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗುತ್ತೆ ಅಂತ ಹೇಳಲಾಗ್ತಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ದರ್ಶನ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ರೆ ಬಿಜೆಪಿಯಿಂದ ಸುದೀಪ್‍ಗೆ ಟಿಕೆಟ್ ನೀಡಲಾಗುತ್ತಾ ಎಂಬ ಚರ್ಚೆಯೂ ಎದ್ದಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಸುದೀಪ್ ಮನವೊಲಿಸಲು ಬಿಜೆಪಿ ಯೋಜನೆ ಹಾಕುತ್ತಿದೆ.

Courtesy: Public tv

Comments