ಸಿಎಂ ಸಿದ್ದರಾಮಯ್ಯರನ್ನು ಜೈಲಿಗೆ ಹಾಕ್ತೀವಿ: ಅಮಿತ್ ಶಾ ರಿಂದ ಪ್ರತಿಜ್ಞೆ

28 Aug 2017 11:41 AM | Politics
1260 Report

ಅಮಿತ್​ ಶಾ ರಾಜ್ಯ ಪ್ರವಾಸ ಮಾಡಿ ಹೋದ ಮೇಲೆ ಸಿಎಂ ಸಿದ್ದು ಹಾಗು ರಾಜ್ಯ ಕಾಂಗ್ರೆಸಿಗರ ನಡವಳಿಕೆಗಳಿಂದ ಬೇಸಗೊಂಡಿದ್ದಾರೆ.

 

ಅಮಿತ್​ ಶಾ ಸುದ್ದಿ ಗೋಷ್ಠಿ ನಡೆಸಿ, ಸಿದ್ದರಾಮಯ್ಯಗೆ ಕೇಂದ್ರ ನೀಡಿರುವ ಹಣದ ಲೆಕ್ಕ ನೀಡಲಿ ಎಂದು ಗುಡುಗಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅಮಿತ್​ ಶಾ ಯಾರು..? ಲೆಕ್ಕ ಕೇಳೋಕೆ..? ನಾನು ರಾಜ್ಯದ ಜನರಿಗೆ ಮಾತ್ರ ಉತ್ತರ ಕೊಡುವವನು, ಶಾಗೆಲ್ಲ ಅಲ್ಲಾ ಎಂದು ಚೇಡಿಸಿ, ಉಡಾಫೆಯ ಮಾತುಗಳನ್ನ ಹಾಡಿದ್ದರು.

ಇದರಿಂದ ಕುಪಿತಗೊಂಡಿರುವ ಅಮಿತ್​ ಶಾ, ಸಿದ್ದರಾಮಯ್ಯ ಏನು ಎಸಿಬಿ ರಚನೆ ಮಾಡಿ ತಮ್ಮ ಉಡಾಫೆಯ ಸರ್ಕಾರ ನಡೆಸುತ್ತಾ, ತಮ್ಮ ಬೆಂಬಲಿಗರಿಗೆ ಕೆಲವು ಕೇಸ್​ಗಳಲ್ಲಿ ಕ್ಲೀನ್​ ಚೀಟ್​ ನೀಡಿಸುತ್ತಿದ್ದಾರೋ, ಜೊತೆಗೆ  ದ್ವೇಶದ ರಾಜಕಾರಣ ಮಾಡುತ್ತಿದ್ದಾರೆಯೋ ಅದೇ ಎಸಿಬಿ ಮೂಲಕ ಸಿದ್ದರಾಮಯ್ಯನನ್ನು ಜೈಲಿಗೆ ಕಳುಹಿಸುವುದಾಗಿ ದೆಹಲಿಯಲ್ಲಿ ನಡೆದ ಅಮಿತ್​ ಶಾ ಅಧ್ಯಕ್ಷತೆಯ ಕೋರ್​ ಕಮಿಟಿ ಸಭೆಯಲ್ಲಿ ಅಮಿತ್​ ಶಾ ಪ್ರತಿಜ್ಞೆ.

Edited By

Suhas Test

Reported By

Suhas Test

Comments