ಶೋಭಾ ಕರಂದ್ಲಾಜೆ ಆಗ್ತಾರ ಕೇಂದ್ರ ರೈಲ್ವೆ ಸಚಿವೆ ?!

24 Aug 2017 8:10 AM | Politics
482 Report

ಕೇಂದ್ರದಲ್ಲಿ ಗಣೇಶ ಚತುರ್ಥಿಯಂದು ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಧಾರದಲ್ಲಿ ರಾಜ್ಯ ನಾಯಕರಿಗೆ ಕೇಂದ್ರ ಮಂತ್ರಿಗಿರಿ ಲಭಿಸುವ ಭಾಗ್ಯವೊಂದು ಸೃಷ್ಠಿಯಾಗಿದೆ.

ಅಲ್ದೇ ಸಾಲು ಸಾಲು ರೈಲ್ವೇ ಅವಘಡದಿಂದ ನೈತಿಕ ಹೊಣೆ ಹೊತ್ತು ಸುರೇಶ್​ ಪ್ರಭು ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಒಂದೊಮ್ಮೆ ಸುರೇಶ್​ ಪ್ರಭು ನೀಡಿದ ರಾಜಿನಾಮೆಯನ್ನು ಮೋದಿ ಅನುಮೋದನೆ ನೀಡಿದ್ದೇ ಆದರೆ ಶೋಭಗೆ ಲಕ್​​ ಖುಲಾಯಿಸ ಬಹುದು.

ಅಲ್ದೇ ರಾಜ್ಯದಲ್ಲಿ ಉಳಿದೆಲ್ಲಾ ಮುಖಂಡರಿಗಿಂತ ಒಂದು ಕೈ ಮೇಲಾಗೇ ಶೋಭಾ ಕರಂದ್ಲಾಜೆ ಕೈ ನಾಯಕರ ಬೆವರಿಳಿಸುತ್ತಿದ್ದು, ಶೋಭಗೆ ಮಂತ್ರಿಗಿರಿ ನೀಡಿದರೆ ರಾಜ್ಯದಲ್ಲಿ ಬಿಜೆಪಿಗೆ ಸಾಕಷ್ಟು ಮೈಲೇಜ್​ ಬಂದೇ ಬರುತ್ತದೆ ಶೋಭ ಜೊತೆ ಕಾರ್ಯಕರ್ತರ ಒಡನಾಟ ಕೂಡ ಚೆನ್ನಾಗಿಯೇ ಇದೆ ಎಂಬ ಕಾತ್ರಿ ಮೇಲೆ ಕೇಂದ್ರ ಸಚಿವೆಯಾಗಿ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.

Edited By

Suhas Test

Reported By

Suhas Test

Comments