ಡಿಕೆಶಿಯವರನ್ನೆ ಮುಂದಿನ ಕಾಂಗ್ರೆಸ್​​​ ಮುಖ್ಯಮಂತ್ರಿ ಅಭ್ಯರ್ಥಿ ಮಾಡಲು ಹೈಕಮಾಂಡ್​​ ಚಿಂತನೆ !

12 Aug 2017 5:03 PM | Politics
2101 Report

ಕಾಂಗ್ರೆಸ್​​ ಪಕ್ಷ ರಾಜ್ಯ ಚುನಾವಣೆಗೆ ಸಕಲ ಸಿದ್ದತೆ ನಡೆಸಿದ್ದು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಡಿ.ಕೆ.ಶಿವಕುಮಾರ್​​ ಘೋಷಣೆ ಮಾಡಲು ಹೈಕಮಾಂಡ್​​ ಚಿಂತನೆ ನಡೆಸಿದೆ.

 

ಐಟಿ ದಾಳಿಯ ನಂತರ ಡಿಕೆಶಿಯವರ ರಾಜಕೀಯ ಭವಿಷ್ಯ ಅಂತ್ಯ ಆದಂತೆ ಎಂದು ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು. ಆದರೆ ಡಿಕೆಶಿ ಮಾತ್ರ ಕಾಂಗ್ರೆಸ್​​ನಲ್ಲಿ ಐಟಿ ದಾಳಿ ಹಾಗೂ ಗುಜರಾತ್​​ ರಾಜ್ಯ ಸಭಾ ಚುನಾವಣೆಯ ನಂತರ ತನ್ನ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.ಅದರಲ್ಲೂ ಗುಜರಾತ್​​​ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್​​ ಪಟೇಲ್​​ ಗೆಲುವಿಗೆ ಡಿಕೆಶಿಯವರ  ಶ್ರಮವೇ ಕಾರಣವಾಗಿದೆ. ಇದರಿಂದ ಡಿಕೆಶಿಯವರ ಶಕ್ತಿ ಕಾಂಗ್ರೆಸ್​​ ಹೈಕಮಾಂಡ್​​ಗೆ​​​ ಮನವರಿಕೆಯಾಗಿದ್ದು ಇದರ ಜೊತೆಗೆ ರಾಜ್ಯದಲ್ಲಿ ಮುಂದೆ ಚುನಾವಣೆ ಬರಲಿದ್ದು ಆ ಚುನಾವಣೆಯಲ್ಲಿ ಡಿಕೆಶಿಯವರನ್ನೆ ಕಾಂಗ್ರೆಸ್​​ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ಹೈಕಮಾಂಡ್​​ ಚರ್ಚೆಯಾಗಿದೆಯಂತೆ.ಇದಕ್ಕೆ ಪೂರಕ ಎನ್ನುವಂತೆ ಸೋನಿಯಾ ಗಾಂಧಿಗೆ ಹತ್ತಿರದವರಾದ ಜನಾರ್ಧನ ಪೂಜಾರಿಯವರು ಇಂದು ಮಂಗಳೂರಿನಲ್ಲಿ ಹೇಳಿರುವ ಹೇಳಿಕೆ ಕೂಡಾ ಡಿಕೆಶಿ ಸಿಎಂ ಅಭ್ಯರ್ಥಿಯಾಗುವ ಸುಳಿವನ್ನು ಕೊಟ್ಟಿದಾರೆ

ಒಟ್ಟಿನಲ್ಲಿ ಈ ಎಲ್ಲಾ ಲಕ್ಷಣವನ್ನ ಗಮನಿಸಿದಾಗ ಕಾಂಗ್ರೆಸ್​​​ ನಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಪೂರ್ಣವಿರಾಮ ಇಟ್ಟು ಡಿಕೆಶಿ ನಾಯಕತ್ವಕ್ಕೆ ಮುನ್ನುಡಿ ಬರೆಯುವ ದಿನ ಸನ್ನಿತವಾಗುತ್ತಿರುವ ಲಕ್ಷಣ ಕಾಣುತ್ತಿದೆ.

Edited By

Suresh M

Reported By

Suresh M

Comments