ತ್ರಿಪುರ ಶಾಸಕರು ಆ.7ರಂದು ಬಿಜೆಪಿಗೆ ಸೇರ್ಪಡೆ

04 Aug 2017 5:51 PM | Politics
479 Report

ಅಗರ್ತಲಾ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಮತ ಹಾಕಿದಕಾರಣಕ್ಕೆ ಉಚ್ಛಾಟನೆ ಗೊಂಡ ತ್ರಿಪುರ ತೃಣಮೂಲ ಕಾಂಗ್ರೆಸ್ ನ ಆರು ಶಾಸಕರು ಆಗಸ್ಟ್ 7ರಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ತ್ರಿಪುರ ಟಿಎಂಸಿಯ ಈ ಆರು ಮಂದಿ ಉಚ್ಛಾಟಿತ ಶಾಸಕರು ನಾಳೆ ಶುಕ್ರವಾರ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಈ ಶಾಸಕರ ಬಿಜೆಪಿ ಸೇರ್ಪಡೆಯನ್ನು ನಮ್ಮ ಕೇಂದ್ರ ನಾಯಕರು ಈಗಾಗಲೇ ಅಂತಿಮಗೊಳಿಸಿದ್ದಾರೆ ಎಂದು ಬಿಜೆಪಿ ವಕ್ತಾರ ವಿಕ್ಟರ್ ಶೋಮ್  ತಿಳಿಸಿದ್ದಾರೆ. ಉಚ್ಛಾಟಿತ ಆರು ತ್ರಿಪುರ ಟಿಎಂಸಿ ಶಾಸಕರು ತಾವು ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿದ್ದರು.

Edited By

Suhas Test

Reported By

Sudha Ujja

Comments