ಸಚಿವ ರಮಾನಾಥ್ ರೈ ಹೇಳಿಕೆ, ವಿಧಾನಸಭೆಯಲ್ಲಿ ಕೋಲಾಹಲ

19 Jun 2017 3:11 PM | Politics
423 Report

ಬೆಂಗಳೂರು: ಆರ್ ಎಸ್ ಎಸ್ ಪ್ರಮುಖ ನಾಯಕ ಪ್ರಭಾಕರ್ ಭಟ್ ಅವರ ವಿರುದ್ಧ ಅರಣ್ಯ ಸಚಿವ ರಮಾನಾಥ್ ರೈ ನೀಡಿದ್ದ ಹೇಳಿಕೆಯ ವಿರುದ್ಧ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಜಗದೀಶ್ಶೆಟ್ಟರ್ ಈ ವಿಚಾರ ಪ್ರಸ್ತಾಪ ಮಾಡಿದ್ರು. ಸಚಿವ ರಮಾನಾಥ್ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಆಡಳಿತ ವೈಖರಿಗೆ ಸಚಿವರ ಹೇಳಿಕೆಯೇ ಸಾಕ್ಷಿ. ಕೂಡಲೇ ಈ ಹೇಳಿಕೆಯನ್ನು ಸಚಿವ ರಮಾನಾಥ್ ರೈ ವಾಪಸ್ ಪಡೆಯಬೇಕು. ಅಲ್ಲದೇ ಕ್ಷಮೆಯಾಚಿಸಬೇಕು. ಜಿಲ್ಲೆಯಲ್ಲಿ ಅನಗತ್ಯವಾದ ಆರ್ ಎಸ್ ಎಸ್ ನಾಯಕರ ಮೇಲಿನ ಸುಳ್ಳು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ ಎಂದು ವಿಧಾನಸಭೆ ಕಲಾಪದ ವೇಳೆ ಜಗದೀಶ್ ಶೆಟ್ಟರ್ ತಿಳಿಸಿದರು.

Edited By

venki swamy

Reported By

Sudha Ujja

Comments