ಕಂಕಣ ಸೂರ್ಯಗ್ರಹಣ ಮಕ್ಕಳನ್ನು ತಿಪ್ಪೆ ಗುಂಡಿಯಲ್ಲಿ ಹೂತಿಟ್ಟ ಪೋಷಕರು
ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ತಾಜಾಸುಲ್ತಾನಪುರದಲ್ಲಿ ಪೋಷಕರು ಮಕ್ಕಳನ್ನು ತಿಪ್ಪೆ ಗುಂಡಿಯಲ್ಲಿ ಕುತ್ತಿಗೆಯವರೆಗೆ ಹೂತಿಟ್ಟ ಘಟನೆ ನಡೆದಿದೆ.
ಕಲಬುರಗಿಯು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಜನರು ಮತ್ತೆ ಮೌಡ್ಯ ಮೆರೆದಿದ್ದಾರೆ. ಸೂರ್ಯಗ್ರಹಣ ಕಾಲಕ್ಕೆ ಅಂಗವಿಕಲ ಮಕ್ಕಳನ್ನು ತಿಪ್ಪೆ ಗುಂಡಿಯಲ್ಲಿ ಕುತ್ತಿಗೆಯವರೆಗೂ ಹೂಳಿಡಲಾಗಿದೆ. ನಗರಸ ಹೊರ ವಲಯದ ತಾಜ ಸುಲ್ತಾನಪುರದಲ್ಲಿ 8-10 ಮಕ್ಕಳಿಗೆ ಹೀಗೆ ಹೂಳಿಡಲಾಗಿದೆ. ಹೀಗೆ ಮಾಡುವುದರಿಂದ ಅಂಗವಿಕಲತೆ ಹೋಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರೆ.
Comments