ಮಂಡ್ಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕ್ಯಾಂಪೇನ್...

01 Apr 2019 4:57 PM | General
488 Report

ಮಂಡ್ಯ ಈಗ ಸ್ಟಾರ್’ಗಳ ಅಖಾಡವಾಗಿ ಬಿಟ್ಟಿದೆ. ಒಂದ್ ಕಡೆ ಸುಮಲತಾ ಪರ ದರ್ಶನ್ ಯಶ್ ರಸ್ತೆಗಿಳಿದು ಪ್ರಚಾರ ಮಾಡ್ತಿದ್ರೆ ಮತ್ತೊಂದ್ ಕಡೆ ಕೆಲ ಸ್ಟಾರ್ ನಟರು ಪರೋಕ್ಷವಾಗಿ ನಿಖಿಲ್ ಗೆ ಬೆಂಬಲ ಸೂಚಿಸ್ತಾ ಇದ್ದಾರೆ. ಇದರ ನಡುವೆ ಉಪೇಂದ್ರ ಕೂಡ ಉತ್ತಮ ಪ್ರಜಾಕೀಯ ಸ್ಪರ್ಧಿ ಪರ ಮತಯಾಚನೆ ಕೈ ಗೊಂಡಿದ್ದಾರೆ.

ಮಂಡ್ಯದಿಂದ ಪ್ರಚಾರ ಆರಂಭಿಸಿರುವ ಉಪ್ಪಿ, ರಾಜಕೀಯ ಹೋಗಿ ಪ್ರಜಾಕೀಯ ಬರಬೇಕು. ಸರ್ಕಾರ ದುಡ್ಡಿರುವವರ ಕೈಯಲ್ಲಿ ಸೇರಿ ಹೋಗಿದೆ. ಮುಂದಿನ ಪೀಳಿಗೆಗಾದರೂ ಇದೆಲ್ಲಾ ಸರಿ ಹೋಗಬೇಕು ಎಂದರು.ರೋಡ್ ಶೋ ಮೇಲೆ ನನಗೆ ನಂಬಿಕೆ ಇಲ್ಲ. ರಾಜಕಾರಣ ವ್ಯಾಪಾರವಾಗಿ ಬಿಟ್ಟಿದೆ. ಇದೆಲ್ಲಾ ಬದಲಾಗ ಬೇಕು ಎಂದರುನರಿಗೆ ಕೆಲಸ ಮಾಡುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ನೀಡಿದ್ದೇವೆ ಎಂದರು. ಇನ್ನೂ 14 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. 

Edited By

Kavya shree

Reported By

Kavya shree

Comments