ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳು….?!!!

08 Feb 2019 1:34 PM | General
770 Report

ದೋಸ್ತಿ ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ಹಿಂದಿನ ಕೆಲ ಯೋಜನೆಗಳನ್ನು ಈ ವರ್ಷಕ್ಕೂ ಮುಂದುವರೆಸಲಾಗಿದೆ. ರೈತರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ಬಾರಿ ಬಜೆಟ್ ಮಂಡನೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಯಲು ಈ ಭಾರಿ ಹೆಚ್ಚು ಒತ್ತು ನೀಡಲಾಗಿದೆ. ಬಜೆಟ್ ನಲ್ಲಿ ರೇಷ್ಮೆ ಸೀರೆಗಳ ನೇಯ್ಗೆಗೆ ಆದ್ಯತೆ ಕೊಡಲಾಗಿದೆ.

  • ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ 1200 ಕೋಟಿ ಅನುದಾನ
  • ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ ಅನುದಾನ
  • ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ                           
  • ರೇಷ್ಮೆ ಕೃಷಿಕರಿಗೆ 2 ಸಾವಿರ ರೂ ಗೌರವ ಧನ
  • ನಾಟಿ ಕೋಳಿ ಸಾಕಣೆ ಉತ್ತೇಜನಕ್ಕೆ 5 ಕೋಟಿ
  • ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ 5 ರಿಂದ 6.ರೂಗಳಿಗೆ ಹೆಚ್ಚಳ.
  • ಹಾಲು ಉತ್ಪಾದಕರ ಪ್ರೋತ್ಸಾಹಕ್ಕೆ 2.500 ಕೋಟಿ ಅನುದಾನ
  • ಮಂಗನ ಕಾಯಿಲೆ ಔಷಧಿ ತಯಾರಿಕೆಗೆ 5 ಕೋಟಿ ಮೀಸಲು
  • ರೈತ ಮಹಿಳೆಯರಿಗೆ ಗೃಹಲಕ್ಷ್ಮಿ ಬೆಳೆಸಾಲ ಯೋಜನೆ
  • ರೈತ ಮಹಿಳೆಯರ ಚಿನ್ನದ ಮೇಲೆ ಶೇ.3 ರಷ್ಟು ಬಡ್ಡಿದರದಲ್ಲಿ ಸಾಲ
  • ಕೆರೆ ತುಂಬಿಸಲು 1680 ಕೋಟಿ
  • ತೋಟಗಾರಿಕೆಗೆ 150 ಕೋಟಿ ಬಜೆಟ್
  • 200 ಕೋಟಿಯಲ್ಲಿ ಮಳವಳ್ಳಿಯಲ್ಲಿ ನೀರಾವರಿ ಯೋಜನೆ
  • 400 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ನಾಲಾ ಯೋಜನೆ

Edited By

Kavya shree

Reported By

Kavya shree

Comments