ದಿನಕ್ಕೆ 75 ರೂಪಾಯಿಗಳನ್ನು ಕಟ್ಟಿ 10 ಲಕ್ಷ ರೂಪಾಯಿ ಪಡೆಯಿರಿ..! ಹೇಗೆ ಅಂತೀರಾ..?

24 Jan 2019 5:36 PM | General
4982 Report

ದಿನವೆಲ್ಲಾ ದುಡಿದರೂ ಕೈಯಲ್ಲಿ ಕಾಸು ಉಳಿಯೋದಿಲ್ಲ ಎಂದರೆ ಅದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ… ಆದರೂ ದುಡಿಯುವುದು ಕಷ್ಟ ಪಡುವುದು ತಪ್ಪುತ್ತಿಲ್ಲ. ಅಲ್ಪ ಸ್ವಲ್ಪ ಹಣ ಕೂಡಿಟ್ಟರು ಕೂಡ ಅದು ಯಾವುದೋ ಒಂದಕ್ಕೆ ಖರ್ಚು ಆಗಿ ಬಿಡುತ್ತದೆ.. ಮುಂದಿನ ದಿನಗಳಲ್ಲಿ ದುಡ್ಡಿಲ್ಲದ ಕಷ್ಟ ಪಡುವ ಪರಿಸ್ಥಿತಿ ಬಂದರೂ ಬರಬಹುದು.. ನಾವು ಹಲವಾರು ಉದ್ದೇಶಗಳಿಗಾಗಿ ಹಣವನ್ನು ಕೂಡಿಡುತ್ತೇವೆ.. ಆದರೆ ಆ ಹಣ ಯಾವುದೋ ಒಂದು ಸಮಯದಲ್ಲಿ ಖರ್ಚಾಗಿ ಬಿಡುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ, ಗೃಹ ನಿರ್ಮಾಣ ಈ ರೀತಿಯ ಭವಿಷ್ಯದ ಕೆಲಸಕ್ಕೆ ಹಣದ ಕೊರತೆ ಎದುರಾಗಬಹದು.. ಈ ರೀತಿಯಾಗಿ ಬಡವರು ತುಂಬಾ ಕಷ್ಟ ಪಡುತ್ತಾರೆ..

ಅದಕ್ಕಾಗಿಯೇ ಅವರಿಗೆ ಅಂತಾನೆ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು ಜಾರಿಗೆ ತಂದಿದೆ.. ಈ ಯೋಜನೆಯಿಂದ ನೀವು ದುಡಿದ ದುಡ್ಡನ್ನು ಉಳಿತಾಯ ಮಾಡಬಹುದು.. ಈ ಯೋಜನೆಯಲ್ಲಿ ನೀವು ದಿನ್ಕಕೆ ಕೇವಲ 75 ರೂ ಕಟ್ಟಿದರೆ ಸಾಕು 10 ಲಕ್ಷ ಹಣವನ್ನು ಪಡೆಯಬಹುದು.. ಈ ಯೋಜನೆಯ ಹೆಸರು ನ್ಯೂ ಜೀವನ್ ಆನಂದ್ ಯೋಜನೆ.. ಈ ಯೋಜನೆಯ ಸದುಪಯೋಗ ಪಡೆಯಲು ನಿಮ್ಮ ವಯಸ್ಸು 18 ರಿಂದ 50 ವರ್ಷದ ಒಳಗಿರಬೇಕು. ಈ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಒಳ ಪಡುವ ಎಲ್ ಐ ಸಿ ಯಿಂದ ಪಡೆದುಕೊಳ್ಳಬಹುದಾಗಿದೆ. ಬಡವರ ಏಳಿಗೆಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಮೇಲೆ ತಿಳಿಸಿರುವ ವಯೋಮಿತಿಯ ಪ್ರಕಾರ ಯಾರು ಬೇಕಾದರೂ ಈ ಯೋಜನೆಯನ್ನು ಬಳಸಿಕೊಳ್ಳಬಹುದು.. ನಿಮಗೆ ಇಷ್ಟವಾಗುವ ಅವಧಿಯನ್ನು ಆಯ್ಕೆ ಮಾಡಿಕೊಂಡು ಅಷ್ಟು ವರ್ಷ ಹಣವನ್ನು ಕಟ್ಟಬಹುದು..ನಿಮ್ಮ ಪಾಲಿಸಿಯ ಅವಧಿ ಮುಗಿದ ನಂತರ ನಿಮ್ಮ ಹಣವನ್ನು ನಿಮಗೆ ಕೊಡಲಾಗುತ್ತದೆ. ಬಡವರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ..  ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ..

Edited By

Manjula M

Reported By

Manjula M

Comments