ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಂದ ಪುಣ್ಯ ತಿಥಿ ಕಾರ್ಯ..!!

07 Dec 2018 5:40 PM | General
563 Report

ಸ್ಯಾಂಡಲ್ ವುಡ್ ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ರವರ ನಿಧನದ ಹಿನ್ನಲೆಯಲ್ಲಿ ಅವರ ಸ್ವಗ್ರಾಮದಲ್ಲಿ ನೀರಸ ಮೌನ ಮನೆ ಮಾಡಿದೆ. ಇದೀಗ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ ತಿಥಿ ಕಾರ್ಯ ನೆರವೇರಿಸಿದ್ದಾರೆ.

ಬೆಳಗ್ಗೆಯಿಂದಲೇ ಪೂಜಾ ಕಾರ್ಯಗಳು ನೆರವೇರಿದ್ದುಕೆಲ ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಂಡು ತಿಥಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ..ಗ್ರಾಮಸ್ಥರು ಹಾಗೂ ಅಭಿಮಾನಿಗಳಿಗಾಗಿ ಸಸ್ಯಹಾರಿ ಊಟದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆದೊಡ್ಡರಸಿನಕೆರೆ ಮಾತ್ರವಲ್ಲದೆ ಮಂಡ್ಯಜಿಲ್ಲೆಯ  ಬಿದರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲೂ ಅಂಬರೀಶ್ ಅವರ ತಿಥಿ ಕಾರ್ಯ ನಡೆಯುತ್ತಿದ್ದುಕೆಲವೆಡೆ ಮಾಂಸಾಹಾರ ಊಟ ತಯಾರಿಸಿಬಡಿಸಲಾಗುತ್ತಿದೆಇದರಿಂದಲೇ ಗೊತ್ತಾಗುತ್ತದೆ ಅಂಬರೀಶ್ ಅವರು ಎಂತಹ ಅಭಿಮಾನಿಗಳನ್ನು ಸಂಪಾದಿಸಿದ್ದರು ಎಂದು,,, ಅಂಬಿ ಎಂದೆಂದಿಗೂ ಜನ ಮಾನಸದಲ್ಲಿ ಉಳಿದಿರುತ್ತಾರೆ.

Edited By

Manjula M

Reported By

Manjula M

Comments