ಜುನಾಗಡ್ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ: ಸಾಮಾನ್ಯ ಕ್ಯಾನ್ಸರ್ ಗೆ ಗೋಮೂತ್ರ ರಾಮಬಾಣ..!

03 Jul 2018 5:33 PM | General
498 Report

ಕ್ಯಾನ್ಸರ್ ಎನ್ನುವುದು ಮಾರಕ ರೋಗ ಎನ್ನುವುದು ಎಲ್ಲರಿಗೂ ತಿಳಿದೆ ಇದೆ, ಆದರೆ ಇದೀಗ ಮಾರಕ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಮದ್ದಾಗಬಹುದು ಎಂದು ಜುನಾಗಡ್ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವಂತಹ  ಜುನಾಗಡ್ ಕೃಷಿ ವಿವಿ ಸಂಶೋಧನಾ ತಂಡ, ಗೋಮೂತ್ರದಿಂದ  ಕ್ಯಾನ್ಸರ್ ರೋಗ ಗುಣಮುಖಕ್ಕೆ ಸಹಾಯ ಮಾಡಬಲ್ಲದು ಎಂದು ತಿಳಿಸಿದ್ದಾರೆ. ಬಾಯಿ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್ ಮುಂತಾದ ಸಾಮಾನ್ಯ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ರಾಮಬಾಣ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಸಂಶೋಧನಾ ತಂಡದ ಮುಖ್ಯಸ್ಥೆ ಶ್ರದ್ಧಾ ಭಟ್, ನಿರಂತರ ಒಂದು ವರ್ಷದಿಂದ ಸಂಶೋಧನೆ ನಡೆಸಿ ಕ್ಯಾನ್ಸರ್ ಗೆ ಗೋಮೂತ್ರ ಮದ್ದು ಎಂಬುದನ್ನು ಕಂಡುಹಿಡಿದಿದ್ದೇವೆ ಎಂದು ತಿಳಿಸಿದ್ದಾರೆ. ಬಾಟಲ್ ನಲ್ಲಿ ಸಂಗ್ರಹಿಸಿಟ್ಟ ಕ್ಯಾನ್ಸರ್ ಸೆಲ್ ಗಳ ಮೇಲೆ ಅದೇ ಪ್ರಮಾಣದ ಗೋಮೂತ್ರ ಪರೀಕ್ಷೆ ಮಾಡಿದಾಗ ಧನಾತ್ಮಕ ಪರಿಣಾಮ ಬಂದಿದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಮುಂದಿನ ಹಂತದಲ್ಲಿ ಇಲಿಗಳ ಮೇಲೆ ಈ ಪ್ರಯೋಗ ಮಾಡಿ ಅದು ಯಶಸ್ವಿಯಾದರೆ, ಗೋಮೂತ್ರ ಒಳಗೊಂಡ ಮಾತ್ರೆಗಳನ್ನು ತಯಾರಿಸುವುದಾಗಿ ಸಂಶೋಧನ ತಂಡವು ತಿಳಿಸಿದೆ.

Edited By

Manjula M

Reported By

Manjula M

Comments