ಅಷ್ಟಕ್ಕೂ ಡಿ-ಬಾಸ್ ಬುದ್ದಿ ಹೇಳಿದ್ದು ಯಾರಿಗೆ?

11 Apr 2018 10:54 AM | General
448 Report

ಎಲ್ಲಾ ಕಡೆಯಲ್ಲೂ ಕೂಡ ಐಪಿಎಲ್ ದೆ ಹವಾ ಜೋರಾಗಿದೆ.ಐ ಪಿ ಎಲ್ ಕ್ರಿಕೆಟ್ ಟೂರ್ನಿ ಕೆಲ ದಿನದ ಹಿಂದಷ್ಟೆ ಶುರುವಾಗಿದೆ. ಈ ಬಾರಿಯ ಸೀಸನ್ ಸಿಕ್ಕಾಪಟ್ಟೆ ಕ್ರೇಜ್ ಹೊಂದಿದೆ. ಪ್ರತಿದಿನವು ಕೂಡ ಐ ಪಿ ಎಲ್ ಮ್ಯಾಚ್ ನೋಡುವುದು ಎಲ್ಲರ ಕಾಯಕ ಆಗಿ ಬಿಟ್ಟಿದೆ.

 

ಐ ಪಿ ಎಲ್ ಪಂದ್ಯವನ್ನು ನೋಡಿ ಖುಷಿ ಪಡುವ ಪ್ರೇಕ್ಷಕ ವರ್ಗ ಒಂದು ಕಡೆ ಆದರೆ, ಇನ್ನೊಂದು ಕಡೆ ಐ ಪಿ ಎಲ್ ಗೆ ಇನ್ನೊಂದು ಮುಖ ಇದೆ. ಅನೇಕರು ಐ ಪಿ ಎಲ್ ಶುರು ಆಗುತ್ತಿದ್ದ ಹಾಗೆ ದುಡ್ಡು ಮಾಡುವ ಪ್ಲಾನ್ ಮಾಡುತ್ತಾರೆ. ದುರಾಸೆ ಬಿದ್ದು ಐ ಪಿ ಎಲ್ ಬೆಟ್ಟಿಂಗ್ ಆಡಿ ಸಾಲ ಮಾಡಿಕೊಳ್ಳುತ್ತಾರೆ. ಆದರೆ ಅಂತಹವರಿಗೆ ಈಗ ನಟ ದರ್ಶನ್ ಬುದ್ದಿ ಹೇಳುತ್ತಿದ್ದಾರೆ. ಐಪಿಎಲ್ ನ ಎಲ್ಲರೂ ಕೂಡ ಎಂಜಾಯ್ ಮಾಡಿ. ಆದರೆ ಯಾರು ಕೂಡ ಬೆಟ್ಟಿಂಗ್ ಕಟ್ಟಿಕೊಳ್ಳಬೇಡಿ ಎಂದು ದಚ್ಚು ಬುದ್ದಿವಾದ ಹೇಳಿದ್ದಾರೆ.ಐಪಿಲ್ ಗೆ ಬೆಂಬಲ ನೀಡಿ ಅದನ್ನ ಬಿಟ್ಟು ದುಡ್ಡನ್ನು ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ.

Edited By

Manjula M

Reported By

Manjula M

Comments