ಚುನಾವಣಾ ಗೀತೆಗೆ ಪದ ರಚಿಸಲಿದ್ದಾರಂತೆ ವಿಕಟ ಕವಿ ಯೋಗರಾಜ್​ ಭಟ್ರು

27 Mar 2018 5:15 PM | General
722 Report

ಮತದಾನದ ಅರಿವು ಮೂಡಿಸೋ ಸಲುವಾಗಿ ಗೀತೆ ರಚಿಸಲು ಚುನಾವಣಾ ಆಯೋಗ ಖ್ಯಾತ ನಿರ್ದೇಶಕ, ಬರಹಗಾರ ಯೋಗರಾಜ್​ ಭಟ್ಟರನ್ನು ಸಂಪರ್ಕ ಮಾಡಿದೆ. ಇನ್ನು ರಾಜ್ಯ ವಿಧಾನಸಭಾ ಚುನಾವಣೆಗಾಗಿ ಭಟ್ಟರು ರಚನೆ ಮಾಡುವ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ನೀಡಿದರೆ, ಇಮ್ರಾನ್ ಸರ್ಧಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರಂತೆ. ಗೀತೆಯನ್ನು ಪಂಚತಂತ್ರ ಚಿತ್ರತಂಡ ಚಿತ್ರೀಕರಣ ಮಾಡಲಿದೆಯಂತೆ.

ಇದೇ ವೇಳೆ ಈ ಬಗ್ಗೆ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಭಟ್ಟರು ಇದು ನನ್ನ ಹಾಗೂ ನನ್ನ ತಂಡದ ಅತಿ ದೊಡ್ಡ ಹೆಮ್ಮೆಗಳಲ್ಲೊಂದು, ಚುನಾವಣಾ ಆಯೋಗ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತಸವಾಗಿದೆ ಅಂತ ಹೇಳಿಕೊಂಡಿದ್ದಾರೆ.

 

Edited By

Shruthi G

Reported By

Madhu shree

Comments